ಸನ್ಮಾರ್ಗ ವಾರ್ತೆ
ನವದೆಹಲಿ,ಅ.13: ಅಂತರ್ ಧರ್ಮೀಯ ದಂಪತಿಯನ್ನು ತೋರಿಸಲಾಗಿರುವ ತನಿಷ್ಕ್ ಜ್ಯುವೆಲ್ಲರಿ ಜಾಹೀರಾತಿಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಎದುರಾದ ಬಳಿಕ ಅದು ಆ ಜಾಹೀರಾತನ್ನು ಹಿಂಪಡೆದುಕೊಂಡಿದೆ. ಅಕ್ಟೋಬರ್ 8ರಂದು 45 ಸೆಕೆಂಡುಗಳ ಈ ಜಾಹೀರಾತು ಬಿಡುಗಡೆಯಾಗಿತ್ತು.
ಮುಸ್ಲಿಂ ಕುಟುಂಬವು ಹಿಂದೂ ಸೊಸೆಯ ಸೀಮಂತವನ್ನು ಹಿಂದೂ ಸಂಪ್ರದಾಯದಂತೆ ಆಯೋಜಿಸಲು ತಯಾರಿ ನಡೆಸುವ ಜಾಹೀರಾತು ಅದಾಗಿತ್ತು. ಈ ಜಾಹೀರಾತು ಮೂಲಕ ತನಿಷ್ಕ್ ‘ಲವ್ ಜಿಹಾದ್’ ಮತ್ತು ‘ನಕಲಿ ಜಾತ್ಯತೀತತೆ’ಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಟೀಕಿಸಲಾಗಿತ್ತು.
ಜಾಲತಾಣಿಗರ ಟೀಕೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.