ಪ.ಬಂಗಾಳದಲ್ಲಿ 15 ಕಡೆ ಬಾಂಬ್ ದಾಳಿ; ಮಗು ಸಹಿತ ಮೂವರಿಗೆ ಗಾಯ

0
688

ಸನ್ಮಾರ್ಗ ವಾರ್ತೆ

ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬುಧವಾರ ರಾತ್ರೆ ಬಾಂಬ್ ದಾಳಿ ನಡೆದಿದ್ದು ಒಂದು ಮಗುವಿನ ಸಹಿತ ಮೂವರು ಗಾಯಗೊಂಡಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಜಗತ್‍ಲಾಲ್ 17ನೇ ಗಾಲಿಯಲ್ಲಿ ಘಟನೆ . ಬಿಜೆಪಿ ಸಂಸದ ಅರ್ಜುನ್ ಸಿಂಗ್ ಮನೆಯ ಸಮೀಪ ಬಾಂಬು ಎಸೆತ ಆಗಿದೆ.

ನಗರದ 15ರಷ್ಟು ಕಡೆಗಳಲ್ಲಿ ಬಾಂಬ್ ಎಸೆತ ನಡೆದಿದೆ. ದುಷ್ಕರ್ಮಿಗಳು ಸಿಸಿಟಿವಿಯನ್ನು ಪುಡಿ ಮಾಡಿದರೆಂದು ಸ್ಥಳೀಯರು ಹೇಳಿದ್ದಾರೆ. ಅಜ್ಞಾತರಾದ ಕೆಲವರು ಗುಂಪುಗೂಡಿ ನಗರಕ್ಕೆ ಬಂದು ಬಾಂಬು ಎಸೆದರೆಂದು ಸ್ಥಳೀಯರು ಹೇಳಿದ್ದಾರೆ.

ಯಾರು ಬಾಂಬು ಎಸೆದದ್ದು, ದುಷ್ಕರ್ಮಿಗಳ ಗುರಿ ಏನಾಗಿತ್ತು ಎಂದು ತಿಳಿದು ಬಂದಿಲ್ಲ. ಘಟನೆಯ ಬೆನ್ನಿಗೆ ಜಗತ್‍ಲಾಲ್ ಪೊಲೀಸರು ಸ್ಥಳಕ್ಕೆ ತಲುಪಿದರು. ಆದರೆ ಪೊಲೀಸರ ವಿರುದ್ಧ ಸ್ಥಳೀಯ ನಿವಾಸಿಗಳು ಒಟ್ಟು ಸೇರಿದರು. ಪೊಲೀಸರು ನೋಡುತ್ತಿದ್ದಂತೆ ಒಂದು ಬಾಂಬ್ ಎಸೆತ ನಡೆಯಿತೆಂದು ಸ್ಥಳೀಯರು ಆರೋಪಿಸಿದರು.

ಪೊಲೀಸರ ಬೆನ್ನಿಗೆ ಸಂಸದ ಅರ್ಜುನ್ ಸಿಂಗ್‍ ಸ್ಥಳಕ್ಕೆ ಬಂದಿದ್ದು. ಅಪರಾಧಿಗಳ ಪತ್ತೆ ಮಾಡಿ ಈಹ ಇಲ್ಲಿಂದ ನಡೆಯಿರಿ ಎಂದು ಅವರು ಹೇಳಿದ್ದಾರೆ. ಕಳೆದ ಹತ್ತು ಹನ್ನೆರಡು ದಿನಗಳಿಂದ ಪೊಲೀಸರಿಗೆ ಕರೆ ಮಾಡಿದರೂ ಜನರ ಸುರಕ್ಷೆಗೆ ಪೊಲೀಸರು ಏನೂ ಮಾಡಿಲ್ಲ ಎಂದು ಅರ್ಜುನ್ ಸಿಂಗ್ ಆರೋಪಿಸಿದರು. ಕಳೆದ ದಿವಸ ಬಾಂಬು ತಯಾರಿಸುವ ವೇಳೆ ಪಶ್ಚಿಮ ಬಂಗಾಳದಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತ ಕೊಲ್ಲಲ್ಪಟ್ಟಿದ್ದನು. ನಂತರ ಪೊಲೀಸರು ದಾಳಿ ನಡೆಸಿದಾಗ ಬಾಂಬ್ ತಯಾರಿಸುವ ವಸ್ತುಗಳು ಅಲ್ಲಿ ಪತ್ತೆಯಾಗಿದ್ದವು.