ಗೋವನ್ನು ತಬ್ಬಿಕೊಳ್ಳುವುದರಿಂದ ಬಿಪಿ, ರೋಗಗಳು ಶಮನವಾಗುತ್ತವೆ: ಯುಪಿ ಸಚಿವರ ಹೊಸ ವರಸೆ

0
187

ಸನ್ಮಾರ್ಗ ವಾರ್ತೆ

ಲಕ್ನೊ: ಗೋವನ್ನು ತಬ್ಬಿಕೊಳ್ಳುವುದರಿಂದ ಬಿಪಿ ಮತ್ತು ಇನ್ನಿತರ ಹಲವು ಕಾಯಿಲೆಗಳಿಗೆ ಉಪಶಮನ ಸಿಗುತ್ತದೆ ಎಂದು ಉತ್ತರ ಪ್ರದೇಶದ ಸಚಿವ ಧರ್ಮಪಾಲ್ ಸಿಂಗ್ ಹೇಳುವ ಮೂಲಕ ಸರ್ವತ್ರ ಟ್ರೋಲ್‌ಗೆ ಗುರಿಯಾಗಿದ್ದಾರೆ. ಫೆಬ್ರವರಿ 14ರ ವ್ಯಾಲೆಂಟೈನ್ಸ್ ದಿನದಂದು ಎಲ್ಲರೂ ಗೋವನ್ನು ತಬ್ಬಿಕೊಳ್ಳಬೇಕೆಂದು ಕೇಂದ್ರ ವನ್ಯಜೀವಿ ರಕ್ಷಣಾ ಇಲಾಖೆ ಕೋರಿಕೊಂಡ ಬಳಿಕ ಸಚಿವರ ಈ ಹೇಳಿಕೆ ಹೊರಬಿದ್ದಿದೆ.

ಸಚಿವ ಧರ್ಮಪಾಲ್ ಸಿಂಗ್ ಈ ಮೊದಲೂ ಇಂಥ ಹೇಳಿಕೆಗೆ ಕುಪ್ರಸಿದ್ದರಾಗಿದ್ದಾರೆ. ವಿಘ್ನಗಳ ನಿವಾರಣೆಗೆ ಗೋಮೂತ್ರ ಅತ್ಯುತ್ತಮವಾಗಿದೆ ಮತ್ತು ಗೋಮೂತ್ರದಲ್ಲಿ ಗಂಗಾ ದೇವಿ ಇದ್ದಾಳೆ ಎಂದು ಕೂಡ ಅವರು ಈ ಹಿಂದೆ ಹೇಳಿದ್ದರು. ಗೋಮೂತ್ರವನ್ನು ಸಿಂಪಡಿಸುವುದರಿಂದ ವಸ್ತುರೂಪದಲ್ಲೋ ಅಥವಾ ಇನ್ಯಾವುದಾದರೂ ರೀತಿಯಲ್ಲೋ ಇರುವ ವಿಘ್ನಗಳನ್ನು ನಿವಾರಿಸಲು ಸಾಧ್ಯ ಎಂದವರು ಈ ಹಿಂದೆ ಹೇಳಿದ್ದರು. ಅಲ್ಲದೆ ಸಗಣಿಯಲ್ಲಿ ಲಕ್ಷ್ಮಿ ದೇವಿ ವಾಸಿಸುತ್ತಾಳೆ ಎಂದು ಕೂಡ ಅವರು ಈ ಹಿಂದೆ ಹೇಳಿಕೆ ನೀಡಿದ್ದರು.