ರೈತರ ಹೋರಾಟವನ್ನು ಶಾಹೀನ್ ಬಾಗ್‌ನಂತೆ ಮಾಡಲು ಟುಕ್ಡೆ-ಟುಕ್ಡೆ ಗ್ಯಾಂಗ್‌ ಶ್ರಮಿಸುತ್ತಿದೆ- ಬಿಜೆಪಿ ನಾಯಕ ಮನೋಜ್ ತಿವಾರಿ ಆರೋಪ

0
414

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.3: ದಿಲ್ಲಿಯಲ್ಲಿ ನಡೆಯುವ ರೈತ ಹೋರಾಟವನ್ನು ಶಾಹೀನ್ ಬಾಗ್ ಮಾದರಿಯ ಹೋರಾಟವಾಗಿ ಮಾರ್ಪಡಿಸಲು ಟುಕ್ಡೆ ಟುಕ್ಡೆ ಗ್ಯಾಂಗ್ ಶ್ರಮಿಸುತ್ತಿದೆ ಎಂದು ಬಿಜೆಪಿ ದಿಲ್ಲಿ ಪ್ರದೇಶ ಅಧ್ಯಕ್ಷ ಮನೋಜ್ ತಿವಾರಿ ಹೇಳಿದ್ದಾರೆ. ಪೌರತ್ವ ಹೋರಾಟ ಕಾನೂನ ವಿರುದ್ಧ ಕೇಂದ್ರ ಸರಕಾರಕ್ಕೆ ದೊಡ್ಡ ತಲೆನೋವು ಸೃಷ್ಟಿಸಿದ ಹೋರಾಟ ಕೇಂದ್ರ ದಕ್ಷಿಣ ದಿಲ್ಲಿಯ ಶಾಹೀನ್ ಭಾಗ್ ಆಗಿತ್ತು. ದೇಶದಲ್ಲಿ ಅಕ್ರಮ ಅವಸ್ಥೆ ಸೃಷ್ಟಿಸಲು ನಡೆದ ಗೂಡಾಲೋಚನೆಯ ಭಾಗ ಈಗ ನಡೆಯುತ್ತಿರುವ ಹೋರಾಟವಾಗಿದೆ ಎಂದು ಮನೋಜ್ ತಿವಾರಿ ಆರೋಪಿಸಿದರು.

ಖಲಿಸ್ಥಾನವನ್ನು ಬೆಂಬಲಿಸುವ ಘೋಷಣೆಗಳು, ಪ್ರಧಾನಿಯ ವಿರುದ್ಧ ಕೊಲೆ ಬೆದರಿಕೆಯನ್ನು ಪ್ರತಿಭಟನೆಯಲ್ಲಿ ಕೆಲವರು ನೀಡುತ್ತಿರುವುದು ಇದಕ್ಕೆ ಉದಾಹರಣೆಯಾಗಿದೆ. ಎನ್‍ಆರ್‌ಸಿ ಮತ್ತು ಸಿಎಎಯ ವಿರುದ್ಧ ವ್ಯಕ್ತಿಗಳು ಮತ್ತು ಸಂಘಟನೆಗಳು ಉಪಸ್ಥಿತಿ ಶಾಹೀನ್ ಭಾಗಿನವರ ಉಪಸ್ಥಿತಿ ರೈತ ಹೋರಾಟವನ್ನು ಟುಕ್ಡೆ ಟುಕ್ಡೆ ಗ್ಯಾಂಗ್ ಶಾಹೀನ್ ಭಾಗ್ 2‌.0 ಆಗಿ ಬದಲಾಯಿಸುತ್ತಿದ್ದಾರೆ ಎಂದು ತಿವಾರಿ ಆರೋಪಿಸಿದರು.

ದಿಲ್ಲಿಯಲ್ಲಿ ಗಲಭೆಗೆ ಸಂಚು ಮಾಡಿದವರು ದೇಶವ್ಯಾಪಕ ಗಲಭೆಗೆ ಶ್ರಮಿಸುತ್ತಿದ್ದಾರೆ. ಇಂತಹವರನ್ನು ಸೋಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿ ಎಂದು ಮನೋಜ್ ತಿವಾರಿ ಹೇಳಿದರು.