ಸನ್ಮಾರ್ಗ ವಾರ್ತೆ
ಬರೇಲಿ,ಜು.20: ಕೋವಿಡ್-19 ರೋಗಿಗಳ ವಾರ್ಡ್ನ ಛಾವಣಿಯ ಪೈಪ್ನ ರಂಧ್ರದ ಮೂಲಕ ಮಳೆ ನೀರು ಸೋರಿಕೆಯಾಗಿದ್ದು, ಆಸ್ಪತ್ರೆಯಲ್ಲಿ ತುಂಬಿಕೊಂಡ ಘಟನೆಯು ಬರೇಲಿ ಆಸ್ಪತ್ರೆಯಲ್ಲಿ ವರದಿಯಾಗಿದೆ.
Hospital in Bareilly with Covid patients #UttarPradesh pic.twitter.com/3JfMI7UyF6
— 🇮🇳 Anindita (@hatefreeworldX) July 19, 2020
ಮಳೆನೀರಿನಿಂದ ಆಸ್ಪತ್ರೆಯಲ್ಲಿ ಪ್ರವಾಹ ಉಂಟಾದ ವಿಡಿಯೋ ವೈರಲ್ ಆದ ನಂತರವೇ ಆಸ್ಪತ್ರೆ ಆಡಳಿತ ಮಂಡಳಿಯು ನೀರು ಸೋರುವಿಕೆಯನ್ನು ತಡೆಯಲು ಕ್ರಮ ಕೈಗೊಂಡಿದೆ ಎಂಬ ಆರೋಪವಿದೆ. ಸೀಲಿಂಗ್ನ ರಂಧ್ರದಿಂದ ನೀರು ಸುರಿಯುತ್ತಿರುವುದನ್ನು ಕಂಡು ರೋಗಿಗಳು ಸ್ತಬ್ಧರಾಗಿದ್ದು, ಕಂಡು ಬಂತು.
The water in Rajshree Medical Research Institute & Hospital entered due to a leakage in pipe. Immediate action was taken and the issue was resolved. A report will be sought: Dr Ashok Kumar, District Surveillance Officer, ACMO, Bareilly (18.07.20) pic.twitter.com/wI6MwuYwnP
— ANI UP (@ANINewsUP) July 19, 2020
“ಪೈಪ್ ಸೋರಿಕೆಯಿಂದಾಗಿ ರಾಜಶ್ರೀ ವೈದ್ಯಕೀಯ ಸಂಶೋಧನಾ ಸಂಸ್ಥೆ ಮತ್ತು ಆಸ್ಪತ್ರೆಯಲ್ಲಿ ನೀರು ಪ್ರವೇಶಿಸಿತ್ತು. ತಕ್ಷಣ ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈ ಕುರಿರು ವರದಿಗೆ ಆದೇಶಿಸಲಾಗಿದೆ ಎಂದು ಎಸಿಎಂಒ, ಬರೇಲಿಯ ಜಿಲ್ಲಾ ಕಣ್ಗಾವಲು ಅಧಿಕಾರಿ ಡಾ.ಅಶೋಕ್ ಕುಮಾರ್ ಹೇಳಿದ್ದಾಗಿ ಎಎನ್ಐ ವರದಿ ಮಾಡಿದೆ.
ಈ ಘಟನೆಯ ವಿಡಿಯೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಗಾಂಧಿ ವಾದ್ರಾ ಸಾಂಕ್ರಾಮಿಕ ರೋಗದ ಮಧ್ಯೆ ಆಸ್ಪತ್ರೆಗಳ ಅಧೋಗತಿಯ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಓದುಗರೇ ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.