ಸನ್ಮಾರ್ಗ ವಾರ್ತೆ
ಚೆನ್ನೈ,ಅ.7: ತಮಿಳು ನಟ ವಿಜಯ್ ಸೇತುಪತಿ ಫ್ಯಾನ್ಸ್ ಅಸೋಸಿಯೇಶನ್ ಪದಾಧಿಕಾರಿಗಳ ನಡುವಿನ ವಿವಾದ ಕೊಲೆಪಾತಕದೊಂದಿಗೆ ಕೊನೆಗೊಂಡಿದೆ. ಪುದುಚೇರಿ ಘಟಕದ ಫ್ಯಾನ್ಸ್ ಅಸೋಸಿಯೇಶನ್ ಅಧ್ಯಕ್ಷ ಆರ್.ಮಣಿಕಂಠನ್ರನ್ನು (30) ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ. ಮುಖ್ಯ ಆರೋಪಿ, ಮಣಿಕಂಠನ್ರ ಪತ್ನಿಯ ಸಹೋದರ ರಾಜಶೇಖರನನ್ನು ಬಂಧಿಸಲಾಗಿದೆ. ಇಬ್ಬರ ನೇತೃತ್ವದಲ್ಲಿ ಒಂದು ವರ್ಷದ ಹಿಂದೆ ಫ್ಯಾನ್ಸ್ ಅಸೋಸಿಯೇಶನ್ ಅಸ್ತಿತ್ವಕ್ಕೆ ಬಂದಿತ್ತು.
ಮಣಿಕಂಠನ್ ಅಧ್ಯಕ್ಷರೂ ರಾಜಶೇಖರ್ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಆರು ತಿಂಗಳ ಬಳಿಕ ಅಧ್ಯಕ್ಷ ಸ್ಥಾನವನ್ನು ರಾಜಶೇಖರ್ಗೆ ಹಸ್ತಾಂತರಿಸಬೇಕಾಗಿತ್ತು. ಆದರೆ, ಸ್ಥಾನವನ್ನು ಬಿಟ್ಟು ಕೊಡಲು ಮಣಿಕಂಠನ್ ಒಪ್ಪಲಿಲ್ಲ. ಒಂದು ಹಂತದಲ್ಲಿ ರಾಜಶೇಖರ್ನನ್ನು ಅಸೋಸಿಯೇಶನ್ನಿಂದ ಉಚ್ಚಾಟಿಸಲಾಗಿತ್ತು. ನಂತರ ಮಣಿಕಂಠನ್ ಕೊಲೆ ನಡೆದಿದೆ.