ಶೈಕ್ಷಣಿಕ ಕಾರ್ಯಾಗಾರದ ಮೇಲೆ ಕೋಮು ದಾಳಿ: ದಾಳಿಕೋರರ ವಿರುದ್ಧ ಕಠಿಣ ಕ್ರಮಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ

0
175

ಸನ್ಮಾರ್ಗ ವಾರ್ತೆ

ಉಳ್ಳಾಲ: ಪುತ್ತೂರು ಸಮೀಪದ ವಿಟ್ಲ ಪ್ರದೇಶದಲ್ಲಿ ಸಾಮಾಜಿಕ ಸೇವಾ ಸಂಸ್ಥೆಯೊಂದು ವಿದ್ಯಾರ್ಥಿಗಳಿಗೋಸ್ಕರ ಹಮ್ಮಿಕೊಂಡ ಶೈಕ್ಷಣಿಕ ಕಾರ್ಯಗಾರದ ಮೇಲೆ ಕೋಮುದಾಳಿ ನಡೆಸಿದ್ದನ್ನು ವೆಲ್ಫೇರ್ ಪಾರ್ಟಿ ಉಳ್ಳಾಲ ಘಟಕ ಖಂಡಿಸಿದೆ.

ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತರಾದ ರಫೀಕ್ ಮಾಸ್ಟರ್‌ರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದರು. ಶೈಕ್ಷಣಿಕ ಕಾರ್ಯಗಾರದ ಮೇಲೆ ಸ್ಥಳೀಯ ಗುಂಪೊಂದು ದಾಳಿ ಮಾಡಿ ಕಾರ್ಯಗಾರವನ್ನು ಅರ್ಧಕ್ಕೆ ನಿಲ್ಲಿಸಿದ್ದಲ್ಲೇ ಕಾರ್ಯಾಗಾರಕ್ಕೆ ಕೋಮು ಬಣ್ಣ ಬಳಿಯಲು ಮುಂದಾಗಿರುವುದು ವಿಪರ್ಯಾಸಕರ ಎಂದು ಉಳ್ಳಾಲ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಅಬ್ದುಸ್ಸಲಾಮ್ ಸಿ ಹೆಚ್ ಹೇಳಿದ್ದಾರೆ.

ಸಂಘಟಕರು ಹಾಗೂ ರಫೀಕ್ ಮಾಸ್ಟರ್‌ರವರ ಮೇಲೆ ದಾಖಲಾದ ಸುಳ್ಳು ದೂರನ್ನು ಕೂಡಲೇ ರದ್ದುಗೊಳಿಸಬೇಕು. ದಾಳಿಕೋರರ ಮೇಲೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.