ಸಿಪಿಎಂ ವಿರುದ್ಧ ತಾನೇನೂ ಮಾತಾಡಲಾರೆ- ರಾಹುಲ್ ಗಾಂಧಿ

0
624

ಕಲ್ಪಟ್ಟ,ಎ.4: ಸಿಪಿಎಂ ಟೀಕೆಗಳನ್ನು ಸಂತೋಷದಿಂದ ಎದುರಿಸುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ತನ್ನ ವಿರುದ್ಧ ಸ್ಪರ್ಧಿಸುವುದು ಸಿಪಿಎಂ ಎಂದು ಗೊತ್ತಿದೆ. ಆದರೆ, ಸಿಪಿಎಂ ವಿರುದ್ಧ ಏನೂ ಹೇಳಲಾರೆ. ವಯನಾಡ್ ಲೋಕಸಭಾ ಕ್ಷೇತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತಾಡುತ್ತಿದ್ದರು.
ಭಾರತ ಒಂದೇ ಎಂಬ ಸಂದೇಶ ನೀಡುವುದಕ್ಕಾಗಿ ವಯನಾಡಿನಿಂದ ಸ್ಪರ್ಧಿಸುತ್ತಿದ್ದೇನೆ. ದಕ್ಷಿಣ ಭಾರತದ ಸಂಸ್ಕೃತಿ, ಭಾಷೆ, ರಾಜಕೀಯವನ್ನು ನಾಶಪಡಿಸುವ ಪ್ರಯತ್ನ ನಡೆಯುತ್ತಿದೆ. ದಕ್ಷಿಣ ಭಾರತಕ್ಕೆ ನಾವು ಮೂಲೆಗೊತ್ತಲ್ಪಡುತ್ತಿದ್ದೇವೆ ಎಂಬ ಅನಿಸಿಕೆಯಿದೆ. ಇದರ ವಿರುದ್ಧ ತನ್ನ ಅಭ್ಯರ್ಥಿತ್ವವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಮೋದಿ ಮತ್ತು ಯೋಗಿ ಏನು ಹೇಳುತ್ತಾರೆ ಎನ್ನುವುದು ತನ್ನ ವಿಷಯವಲ್ಲ. ರೈತರ, ಯುವಕರ ಸಮಸ್ಯೆ ತನಗೆ ಪ್ರಾಮುಖ್ಯವಾಗಿದೆ ಎಂದು ಅವರು ಹೇಳಿದರು.