ಹೈದರಾಬಾದ್ ಬದಲು ‘ಭಾಗ್ಯನಗರ’ ಹೆಸರು: ಯೋಗಿ ಆದಿತ್ಯನಾಥ್‌ ಸಲಹೆಗೆ ABAP ಬೆಂಬಲ

0
425

ಸನ್ಮಾರ್ಗ ವಾರ್ತೆ

ಪ್ರಯಾಗ್‌ರಾಜ್: ಹೈದರಾಬಾದ್ ಹೆಸರನ್ನು ಬದಲಾಯಿಸುವಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಸಲಹೆಗೆ ಎಬಿಎಪಿ ಬೆಂಬಲ ನೀಡಿದೆ ಎಂದು ಅಖಿಲ ಭಾರತೀಯ ಅಖಾರಾ ಪರಿಷತ್ (ಎಬಿಎಪಿ) ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ಹೇಳಿದ್ದಾರೆ.

“ಮೊಘಲರು ಶತಮಾನಗಳಿಂದ ದೇಶವನ್ನು ಆಳಿದ್ದರು ಮತ್ತು ಅನೇಕ ಹಳೆಯ ಮತ್ತು ಸಾಂಪ್ರದಾಯಿಕ ನಗರಗಳ ಹೆಸರನ್ನು ಬದಲಾಯಿಸಿದ್ದರು … ‘ಭಾಗ್ಯನಗರ’ ಎಂದು ಮರುನಾಮಕರಣ ಮಾಡಿದ ನಂತರ ಹೈದರಾಬಾದ್ ಭಾಗ್ಯ (ವಿಧಿ) ಬದಲಾಗುವ ಸಾಧ್ಯತೆಯಿದೆ” ಎಂದು ಅವರು ಹೇಳಿದರು.

ಯೋಗಿ ಆದಿತ್ಯನಾಥ್, ಕಳೆದ ವಾರ ಹೈದರಾಬಾದ್‌ನಲ್ಲಿ ಪುರಸಭೆ ಚುನಾವಣೆಗಾಗಿ ಪ್ರಚಾರ ನಡೆಸುತ್ತಿದ್ದಾಗ, ತೆಲಂಗಾಣ ರಾಜಧಾನಿಯ ಹೆಸರನ್ನು ‘ಭಾಗ್ಯನಗರ’ ಎಂದು ಬದಲಾಯಿಸಬೇಕು ಎಂದು ಹೇಳಿದ್ದರು.

“ಯುಪಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಾವು ಫೈಜಾಬಾದ್ ಅನ್ನು ಅಯೋಧ್ಯೆ ಮತ್ತು ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದು ಮರುನಾಮಕರಣ ಮಾಡಿದ್ದೇವೆ” ಎಂದು ಅವರು ಹೇಳಿದರು.