ಹಿಟ್ಲರ್ ಜರ್ಮನಿಯನ್ನು ನಾಶಪಡಿಸಿದಂತೆ ಬಿಜೆಪಿ ಭಾರತವನ್ನು ನಾಶಪಡಿಸುತ್ತಿದೆ: ದಿಗ್ವಿಜಯ್ ಸಿಂಗ್

0
503

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಬಿಜೆಪಿಯನ್ನು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹಿಟ್ಲರಿಗೆ ಹೋಲಿಸಿದ್ದಾರೆ. ಚುನಾವಣೆಗೆ ಅಂತಿಮ ಹಂತ ಬಂತಲ್ಲವೇ. ಇನ್ನು ಹಿಂದುತ್ವ ಅಪಾಯದಲ್ಲಿರುತ್ತದೆ. ಹಿಂದುತ್ವವನ್ನು ರಕ್ಷಿಸಲು ಎಲ್ಲರೂ ಬಿಜೆಪಿಗೆ ವೋಟು ಕೊಡಬೇಕು ಎಂಬ ಹೇಳಿಕೆಗಳೊಂದಿಗೆ ಬಿಜೆಪಿ ನಾಯಕರು ರಂಗ ಪ್ರವೇಶಿಸುತ್ತಾರೆ. ಹಿಟ್ಲರನ ಅದೇ ನೀತಿ ಬಿಜೆಪಿ ಅನುಸರಿಸುತ್ತಿದೆ. ಹಿಟ್ಲರ್ ಜರ್ಮನಿಯನ್ನು ನಾಶಪಡಿಸಿದಂತೆ ಬಿಜೆಪಿ ಭಾರತವನ್ನು ನಾಶಪಡಿಸುತ್ತಿದೆ ಎಂದು ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಮಧ್ಯ ಪ್ರದೇಶದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಇದೇ ವೇಳೆ ದಿಗ್ವಿಜಯ್ ಸಿಂಗ್ ಗಂಭೀರ ಆರೋಪ ಹೊರಿಸಿದ್ದಾರೆ. ಅಕ್ಟೋಬರ್ 30ಕ್ಕೆ ಮಧ್ಯಪ್ರದೇಶದ ಪೃಥ್ವಿಪುರ, ರೈಗಾವ್, ಜೊಬಟ್ಟ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.