ರೈತರ ಭಾರತ ಬಂದ್‍ ಕರೆಗೆ ಕಾಂಗ್ರೆಸ್ ಬೆಂಬಲ

0
600

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.6: ಮಂಗಳವಾರ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್‍ಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಪಾರ್ಟಿ ಕಚೇರಿಗಳಲ್ಲಿಯೂ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಲಿದೆ. ಶಾಂತಿಯುತ ಪ್ರತಿಭಟನೆ ನಡೆಯಲಿದೆ. ರೈತರಿಗೆ ರಾಹುಲ್ ಗಾಂಧಿ ನೀಡಿದ ಪ್ರತಿಭಟನೆ ಶಕ್ತಿಯುತಗೊಳಿಸಬೇಕಾದ ಸಮಯ ಇದು ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇಡ ಹೇಳಿದರು.

ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ರೈತ ಸಂಘಟನೆಗಳು ಭಾರತ್ ಬಂದ್ ಕರೆ ನೀಡಿವೆ. ದಿಲ್ಲಿಯ ಗಡಿಯಲ್ಲಿ ರೈತರು ಪ್ರತಿಭಟನೆ ಕೂತು ಇಂದಿಗೆ ಹನ್ನೊಂದು ದಿನಗಳಾಗಿವೆ. ನಿನ್ನೆ ಕೇಂದ್ರ ಸರಕಾರದೊಂದಿಗೆ ರೈತರ ಚರ್ಚೆ ನಡೆದಿತ್ತು. ಐದನೆಯ ಬಾರಿಯೂ ಚರ್ಚೆ ವಿಫಲವಾಯಿತು. ಆದರಿಂದ ಹೋರಾಟವನ್ನು ತೀವ್ರಗೊಳಿಸಲು ರೈತ ಸಂಘಟನೆಗಳು ತೀರ್ಮಾನಿಸಿವೆ.