ಬಿಹಾರ ಜೆಡಿಯು ಶಾಸಕನಿಗೆ ವಿಮಾನ ನಿಲ್ದಾಣದಲ್ಲಿಯೇ ಐಟಿ ವಿಚಾರಣೆ!

0
206

ಸನ್ಮಾರ್ಗ ವಾರ್ತೆ

ಪಟ್ನಾ: ಬಿಹಾರದ ಜನತಾದಳ ಯುನೈಟೆಡ್ (ಜೆಡಿಯ) ಎಮ್‌ಎಲ್‌ಸಿ  ದಿನೇಶ್ ಸಿಂಗ್‍ರನ್ನು ಪಟ್ನಾ ವಿಮಾನ ನಿಲ್ದಾಣದಲ್ಲಿ ತಡೆದ ಆದಾಯ ತೆರಿಗೆ ವಿಭಾಗ ವಿಚಾರಣೆ ನಡೆಸಿದೆ. ದಿಲ್ಲಿಯಿಂದ ಅವರು ಬರುತ್ತಿದ್ದರು. ಹೀಗೆ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ದಿನೇಶ್ ಸಿಂಗ್‍ರನ್ನು ತಡೆದು ಮೂರು ಗಂಟೆಗಳ ಕಾಲ ಐಟಿ ವಿಚಾರಣೆಗೆ ಒಳಪಡಿಸಿದೆ‌.

ಸೀಲು ಹಾಕಿದ ಪೆಟ್ಟಿಗೆಯೊಂದಿಗೆ ಐಟಿ ವಿಭಾಗದವರು ವಿಚಾರಣೆ ಮುಗಿಸಿ ಹೊರ ಬಂದರು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಅಧಿಕಾರಿಗಳು ತನ್ನನ್ನು ಪ್ರಶ್ನಿಸಿದರೂ ಅವರು ನಿರೀಕ್ಷಿಸಿದ್ದೇನೂ ಸಿಗಲಿಲ್ಲ ಎಂದು ದಿನೇಶ್ ಸಿಂಗ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದೂ ಅವರು ತಿಳಿಸಿದರು. “ಆದಾಯ ತೆರಿಗೆ ಅಧಿಕಾರಿಗಳು ತಮಗೆ ಅವಶ್ಯಕವಾಗಿರುವ ಎಲ್ಲ ಪ್ರಶ್ನೆಗಳನ್ನು ಕೇಳಿದ್ದಾರೆ  ಆದರೆ, ಅವರಿಗೆ ಯಾವುದೇ ಹಣ ಅಥವಾ ಇತರ ಮಾಹಿತಿ ಲಭ್ಯವಾಗಿಲ್ಲ” ಎಂದು ದಿನೇಶ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.