ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ಮೂಲಕ ಸತ್ಯ ಸುದ್ದಿಗಳನ್ನು ಮಾಧ್ಯಮಗಳು ಬಿತ್ತರಿಸಲಿ – ಸ್ವರ್ಣ ಭಟ್

0
600

ಸನ್ಮಾರ್ಗ ವಾರ್ತೆ

ಉಡುಪಿ | ವಾಟ್ಸಪ್, ಪೇಸ್ ಬುಕ್ ನಂತಹ ಸಾಮಾಜಿಕ ತಾಣಗಳಲ್ಲಿ ಸತ್ಯಕ್ಕಿಂತ ಸುಳ್ಳು ಸುದ್ದಿಗಳೇ ನಮ್ಮ ನಡುವೆ ಹೆಚ್ಚಾಗಿ ಶೇರ್ ಆಗುತ್ತಿದೆ. ಇಂತಹ ಸುಳ್ಳು ಸುದ್ದಿಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ. ನಮಗೆ ಬರುವ ಸುದ್ದಿಗಳನ್ನು ಪರಾಮರ್ಶೆ ನಡೆಸದೆ ಶೇರ್ ಮಾಡುತ್ತಿದ್ದೇವೆ ಇದರಿಂದಾಗಿ ಪರಸ್ಪರ ಸಂಬಂಧಗಳೇ ಹಾಳಾಗುತ್ತಿರುವುದನ್ನು ನಾವು ಇಂದು ಕಾಣುತ್ತಿದ್ದೇವೆ.

ನಮ್ಮ ಮೊಬೈಲ್ ಗೆ ಬಂದ ಸುದ್ದಿಗಳೇ ನಾವು ಸತ್ಯ ಎಂದು ನಂಬುವಷ್ಟರ ಮಟ್ಟಿಗೆ ನಾವು ಸುಳ್ಳು ಸುದ್ದಿಗಳಿಗೆ ಅವಲಂಭಿತರಾಗಿದ್ದೇವೆ ಮಾಧ್ಯಮಗಳು ಸುಳ್ಳುಗಳನ್ನು ಬಿತ್ತರಿಸದೇ ಸತ್ಯ ಸುದ್ದಿಗಳನ್ನು ಬಿತ್ತರಿಸುವ ಮೂಲಕ ಸಮಾಜದ ಕನ್ನಡಿಯಾಗಿ ಕಾರ್ಯ ನಿರ್ವಹಿಸಲಿ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕಿಯಾದ ಸ್ವರ್ಣ ಭಟ್ ಹೇಳಿದರು.

ಇವರು ಉಡುಪಿಯ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದ ಈ ದಿನ ನಾಗರಿಕ ಪತ್ರಕರ್ತರ ಸಮಾಗಮ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಚಿಂತಕರು ಹಾಗೂ ಸಹಬಾಳ್ವೆ ಉಡುಪಿಯ ನಾಗೇಶ್ ಉದ್ಯಾವರ್ ಮಾತನಾಡಿ ಈದಿನ.ಕಾಮ್ ಕಳೆದ ವಿಧಾನಸಭಾ ಚುನಾವಣೆಯ ನಿಖರವಾದ ಸಮೀಕ್ಷೆ ನಡೆಸಿ ಜನಮನ್ನಣೆಯನ್ನು ಪಡೆದಿದೆ. ಯಾರೂ ಕೂಡ ಊಹಿಸಿಯೇ ಇಲ್ಲದಂತಹ ಸಮೀಕ್ಷೆ ನಡೆಸಿತ್ತು. ಮತ್ತು ಫಲಿತಾಂಶ ಬಂದ ನಂತರ ಅತ್ಯಂತ ನಿಖರವಾದ ಸಮೀಕ್ಷೆ ಈದಿನ.ಕಾಮ್ ನ ಹೊರತಾಗಿ ದೊಡ್ಡ ದೊಡ್ಡ ಮಾಧ್ಯಮಗಳು ಯಾರು ಕೂಡ ನಿಖರವಾದ ಸಮೀಕ್ಷೆ ನೀಡಿರಲಿಲ್ಲ. ಈದಿನ.ಕಾಮ್ ಜನ ಸಾಮಾನ್ಯರ ಧ್ವನಿಯಾಗಿ ಮುಂದುವರೆಯಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ ವಿನ್ಸೆಂಟ್ ಆಳ್ವಾ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಸುಂದರ್ ಮಾಸ್ಟರ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಸದಸ್ಯರಾದ ಪೀರ್ ಸಾಹೇಬ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಸ್ ಮೀಡಿಯಾ ಫೌಂಡೇಶನ್ ನ ವ್ಯವಸ್ಥಾಪಕರಾದ ಉಮರ್ ಯು ಹೆಚ್ ವಹಿಸಿದ್ದರು. ಈದಿನ.ಕಾಮ್ ಕರಾವಳಿ ವಲಯ ವರದಿಗಾರ ಶಾರೂಕ್ ತೀರ್ಥಹಳ್ಳಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.