ಮಂಗಳೂರು: ಕುಣಿಲ್ ಸೆಂಟರ್ ನ ನೂತನ ಅಧ್ಯಕ್ಷರಾಗಿ ಮೌಶೀರ್ ಅಹ್ಮದ್ ಸಾಮಣಿಗೆ ಆಯ್ಕೆ

0
864
  1. ಮಂಗಳೂರಿನ ಹೃದಯ ಭಾಗದಲ್ಲಿರುವ ಕುಣಿಲ್ ಸೆಂಟರ್ ನ ಮ್ಯೆಂಟನನ್ಸ್ ಅಂಡ್ ಡೆವಲಪರ್ಸ್ ಕಮಿಟಿಯ ಮಹಾಸಭೆಯು ಡಿಸಂಬರ್ 28 ರಂದು ಕುಣಿಲ್ ಸೆಂಟರ್ ಕಛೇರಿಯಲ್ಲಿ ನಡೆಯಿತು. ಕೃಷ್ಣ ಸಾಲ್ಯಾನ್ ಬಿಜ್ಯೆ ಅವರು ಸಭೆಯ ಅದ್ಯಕ್ಷತೆಯನ್ನು ವಯಿಸಿದ್ದರು. ಸಭೆಯಲ್ಲಿ ಮೌಶೀರ್ ಅಹ್ಮದ್ ಸಾಮಣಿಗೆ ಅವರನ್ನು ಮ್ಯೆಂಟನನ್ಸ್ ಅಂಡ್ ಡೆವೆಲಪರ್ಸ್ ಕಮಿಟಿಯ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಅಯ್ಕೆಮಾಡಲಾಯಿತು.

ನೂತನ ಕಮಿಟಿಯ ಉಪಾಧ್ಯಕ್ಷರಾಗಿ ಪಯಾಝ್ ಮ್ಯಸೂರ್, ಸಮೀರ್ ಕಲ್ಕತ್ತಾ ಇವರು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಸನತ್ ಕುಮಾರ್, ಕಾರ್ಯದರ್ಶಿಯಾಗಿ ಇರ್ಫಾನ್ ನದಾ, ಕಜಾಂಜಿಯಾಗಿ ಕೃಷ್ಣ ಸಾಲ್ಯಾನ್ ಬಿಜ್ಯೆ, ಜೊತೆ ಕಾರ್ಯದರ್ಶಿಯಾಗಿ ರಶೀದ್ ಬ್ಲೊ ಪಾರ್ ಮ್ಯಾನ್ ಮತ್ತು ಕಮಿಟಿ ಉಸ್ತುವಾರಿಯಾಗಿ ರಿಯಾಝ್ ಫೆಸ್ಟ್ ಹಾಗೂ ರಶೀದ್ ಚುನರಿ ಅವರನ್ನು ಅಯ್ಕೆ ಮಾಡಲಾಯಿತು. ಅಲ್ಲದೆ ನವಾಝ್ ಹೊಸ್ಯೆರಿ, ಶರೀಫ್ ಖಾನ್ಸ್, ಸಿದ್ದೀಕ್ ಜೋಕಟ್ಟೆ, ರಹ್ಮಾನ್ ಬ್ಲೂ ಲೇಡಿ, ಹನೀಫ್, ಸಫ್ವಾನ್ ಡೆಲ್ಮನ್ ಅವರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಕಮಿಟಿಯ ಕಾನೂನು ಸಲಹೆಗಾರರಾಗಿ ಕೃಷ್ಣ ಕುಮಾರ್ ಅವರನ್ನು ಮುಂದುವರಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.