ಜಮೀಯತುಲ್ ಉಲಮಾ-ಏ-ಹಿಂದ್ ಅಧ್ಯಕ್ಷ ಮೌಲಾನ ಖಾರೀ ಸೈಯದ್ ಮುಹಮ್ಮದ್ ಉಸ್ಮಾನ್ ಮನ್ಸೂರ್‌ಪುರಿ ನಿಧನ

0
345

ಸನ್ಮಾರ್ಗ ವಾರ್ತೆ

ಗುರುಗ್ರಾಮ: ಖ್ಯಾತ ಇಸ್ಲಾಮಿ ಪಂಡಿತ, ಜಮೀಯತುಲ್ ಉಲಮಾ-ಏ-ಹಿಂದ್ ಅಧ್ಯಕ್ಷ ಹಾಗೂ ದಾರುಲ್ ಉಲೂಮ್ ದಿಯೋಬಂದ್ ನ ಧಾರ್ಮಿಕ ನೇತೃತ್ವವನ್ನು ವಹಿಸಿದ್ದ ಮೌಲಾನ ಖಾರೀ ಸೈಯದ್ ಮುಹಮ್ಮದ್ ಉಸ್ಮಾನ್ ಮನ್ಸೂರ್ ಪುರಿಯವರು ನಿನ್ನೆ ನಿಧನರಾಗಿದ್ದಾರೆಂದು ತಿಳಿದು ಬಂದಿದೆ. ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಕೋವಿಡ್ ಸಂಬಂಧಿ ಕಾಯಿಲೆಯಿಂದ ನಿಧನರಾಗಿದ್ದಾರೆ ಎನ್ನಲಾಗಿದೆ.

ಅವರು ಮುಸ್ಲಿಂ ಸಮುದಾಯದ ಉನ್ನತ ವಿದ್ವಾಂಸರಾಗಿದ್ದು, ದಾರುಲ್ ಉಲೂಮ್ ದಿಯೋಬಂದ್ ನ ಮುಖ್ಯ ವಿದ್ವಾಂಸರಾಗಿದ್ದರು. ಭಯೋತ್ಪಾದನೆಯ ವಿರುದ್ಧ ಫತ್ವಾ ನೀಡಿದ್ದ ಇವರು ಭಯೋತ್ಪಾದನೆಯ ವಿರುದ್ಧ ಆಂದೋಲನವನ್ನೂ ಕೈಗೊಂಡಿದ್ದರು ಎಂದು ಜಮೀಯತ್ ಉಲಮಾ ಹಿಂದ್ ತನ್ನ ಟ್ವಿಟರ್‌ನಲ್ಲಿ ತಿಳಿಸಿದೆ.

ಅವರು ಹಿಂದೂ-ಮುಸ್ಲಿಂ ಸಮುದಾಯಗಳ ಒಗ್ಗಟ್ಟಿನ ನಡುವಿನ ಸೇತುವೆಯಾಗಿದ್ದು, ಜಮೀಯತುಲ್ ಉಲಮಾದ ಅಡಿಯಲ್ಲಿ ಸದ್ಭಾವನಾ ಮಂಚ್ ಅನ್ನು ಸ್ಥಾಪಿಸಿದ್ದರು.