ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಗಣರಾಜ್ಯೋತ್ಸವದಂದು ಮುಖ್ಯ ಅತಿಥಿಗಳಾಟಗಿ ವಿದೇಶಿ ಗಣ್ಯರು ಭಾಗವಹಿಸುವುದಿಲ್ಲ ಎಂದು ವಿದೇಶ ಸಚಿವಾಲಯ ತಿಳಿಸಿದೆ. ಕೊರೋನ ವೈರಸ್ ಸೃಷ್ಟಿಸಿದ ಜಾಗತಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು ಈ ಹಿಂದೆ ಇಂಗ್ಲೆಂಡಿನ ಪ್ರಧಾನಿ ಬೊರಿಸ್ ಜಾನ್ಸನ್ ರಿಪಬ್ಲಿಕ್ ದಿನದಲ್ಲಿ ಮುಖ್ಯ ಅತಿಥಿಯಾಗಿ ಬರುತ್ತಾರೆ ಎಂದು ತಿಳಿಸಿತ್ತು ನಂತರ ಹೊಸ ಪ್ರಭೇದದ ವೈರಸ್ ಹರಡಿದ್ದರಿಂದ ಅವರು ಹಿಂದೆ ಸರಿದಿದ್ದರು.
ಐದು ದಶಕಗಳಲ್ಲಿ ಮೊದಲ ಬಾರಿ ವಿದೇಶಿ ಗಣ್ಯ ಅತಿಥಿಗಳಿಲ್ಲದೇ ರಿಪಬ್ಲಿಕ್ ಡೇ ಕಾರ್ಯಕ್ರಮ ನಡೆಯಲಿದೆ. ಜಾಗತಿಕವಾಗಿ ಕೊರೋನ ಹುಟ್ಟುಹಾಕಿರುವ ಪರಿಸ್ಥಿತಿಯನ್ನು ಪರಿಗಣಿಸಿ ಈ ವರ್ಷ ರಿಪಬ್ಲಿಕ್ ದಿನ ಕಾರ್ಯಕ್ರಮದಲ್ಲಿ ಯಾವ ವಿದೇಶಿ ಗಣ್ಯರು ಇರುವುದಿಲ್ಲ. ಕೊರೋನ ವೈರಸ್ ಹರಡುವಿಕೆಯಿಂದ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಂಡು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.