ಪ್ರಧಾನಿ ಮೋದಿ ಹೆಸರು ಹೇಳಿ ಇನ್ನು ಚುನಾವಣೆಯಲ್ಲಿ ಗೆಲ್ಲಲಾಗದು: ಕೇಂದ್ರ ಸಚಿವ

0
497

ಸನ್ಮಾರ್ಗ ವಾರ್ತೆ

ಚಂಡೀಗಡ: ಪ್ರಧಾನಿ ನರೇಂದ್ರ ಮೋದಿಯ ಹೆಸರು ಹೇಳಿಕೊಂಡು ಇನ್ನೂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಕೇಂದ್ರ ಸಹಸಚಿವ ರಾವ್ ಇಂದ್ರಜೀತ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು. ಹರಿಯಾಣದಲ್ಲಿ ಬಿಜೆಪಿಯ ಆಂತರಿಕ ಸಭೆಯಲ್ಲಿ ಕೇಂದ್ರ ಕಾರ್ಪೊರೇಟ್ ಸಹ ಸಚಿವ ಇಂದ್ರಜಿತ್ ಸಿಂಗ್ ಹೀಗೆ ಹೇಳಿದರು.

2024ರಲ್ಲಿ ಹರಿಯಾಣ ವಿಧಾನಸಭಾ ಚುನಾವಣೆ ನಡೆಯಲಿಕ್ಕಿದೆ. ನರೇಂದ್ರ ಮೋದಿಯ ಆಶೀರ್ವಾದ ನಮಗೆ ಇದೆ. ಆದರೆ ಹರಿಯಾಣದಲ್ಲಿ ಮೋದಿಯ ಹೆಸರು ಹೇಳಿ ಇನ್ನೂ ಮತಗಳಿಸಿ ಗೆಲ್ಲುವ ವಿಶ್ವಾಸವಿಲ್ಲ. ಮೋದಿಯ ಹೆಸರಿನಲ್ಲಿ ಮತ ಕೇಳಬೇಕೆಂದು ನಮ್ಮ ಬಯಕೆ. ಆದರೆ ಕೆಳಹಂತದಲ್ಲಿ ಕೆಲಸ ಮಾಡುವ ಬಿಜೆಪಿ ಕಾರ್ಯಕರ್ತರ ಕೆಲಸದಿಂದ ಮತ ಸಿಗುತ್ತವೆ ಎಂದು ಅವರು ಹೇಳಿದರು.

2014 ಬಿಜೆಪಿ ಅಧಿಕಾರ ಸಿಕ್ಕಿದ್ದು ಮೋದಿಯ ಹೆಸರಿನಲ್ಲಿ ಎಂಬುದರಲ್ಲಿ ತರ್ಕವಿಲ್ಲ. ಎಲ್ಲ ರಾಜ್ಯಗಳಲ್ಲಿ ಅಂದು ಅಲೆ ಇತ್ತು. ಹರಿಯಾಣದಲ್ಲಿ ಮೊದಲ ಬಾರಿ ನಮಗೆ ಸರಕಾರ ರಚಿಸಲು ಸಾಧ್ಯವಾಯಿತು. ಎರಡನೇ ಬಾರಿ ನಮಗೆ ಅಧಿಕಾರ ಸಿಕ್ಕಿತು ಆದರೆ ಮುಂದಿನ ಬಾರಿ ಬೇರೆ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಬಿಜೆಪಿ ಕಾರ್ಯಕರ್ತರು ಮತ್ತು ಹಿರಿಯ ನಾಯಕರ ಸಭೆಯಲ್ಲಿ ರಾವು ಇಂದ್ರಜಿತ್ ಹೀಗೆಂದಿದ್ದಾರೆ.