ಕೃಷಿ ಕಾನೂನು: ಇಂದು ವಿರೋಧ ಪಕ್ಷ ನಾಯಕರಿಂದ ರಾಷ್ಟ್ರಪತಿ ಭೇಟಿ ಸಾಧ್ಯತೆ

0
380

ಸನ್ಮಾರ್ಗ ವಾರ್ತೆ

ನವದೆಹಲಿ: ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯು ತೀವ್ರಗೊಂಡಿದ್ದು, ಈ ಕುರಿತು ಐವರು ವಿರೋಧ ಪಕ್ಷದ ನಾಯಕರು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರನ್ನು ಇಂದು ಭೇಟಿ ಮಾಡಲಿದ್ದಾರೆ ಎಂಬುದಾಗಿ ವರದಿಯಾಗಿದೆ.

ನಿಯೋಗದಲ್ಲಿ ಐಎನ್‌ಸಿಯ ರಾಹುಲ್ ಗಾಂಧಿ, ಎನ್‌ಸಿಪಿಯಿಂದ ಶರದ್ ಪವಾರ್, ಸಿಪಿಐ(ಎಂ)ನಿಂದ ಸೀತಾರಾಮ್ ಯೆಚೂರಿ, ಸಿಪಿಐನಿಂದ ಡಿ ರಾಜ ಮತ್ತು ಡಿಎಂಕೆ ಯಿಂದ ಟಿ.ಕೆ.ಎಸ್ ಎಲಂಗೋವನ್‌ ಇರಲಿದ್ದಾರೆ.

ಸಂಜೆ 5 ಗಂಟೆಗೆ ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿಯಾಗುವ ಮುನ್ನ ಪ್ರತಿಪಕ್ಷ ನಾಯಕರು ತಮ್ಮ ನಡುವೆ ಮಧ್ಯಾಹ್ನ ಸಭೆ ನಡೆಸುವ ಸಾಧ್ಯತೆ ಇದೆ.