ಪ್ರಜ್ಞಾಸಿಂಗ್‍ ಮೂಲಕ ಹೊರಬರುತ್ತಿರುವುದು ಬಿಜೆಪಿ-ಆರೆಸ್ಸೆಸ್ ಮಾನಸಿಕತೆ -ರಾಹುಲ್ ಗಾಂಧಿ

0
597

ಸನ್ಮಾರ್ಗ ವಾರ್ತೆ-

ಬಿಜೆಪಿ ಆರೆಸ್ಸೆಸ್ ಮನಸ್ಸಿನಲ್ಲಿರುವುದು ಪ್ರಜ್ಞಾರ ಮೂಲಕ ಹೊರಬಂದಿದೆ. ಅವರ ವಿರುದ್ಧ ಕ್ರಮ ಜರಗಿಸಬೇಕೆಂದು ರಾಹುಲ್ ಆಗ್ರಹಿಸಿದರು. ಈ ಹಿಂದೆ ವಿವಾದ ಹೇಳಿಕೆ ನೀಡಿದ್ದಕ್ಕೆ ಪ್ರಜ್ಞಾ ಸಿಂಗ್ ಠಾಕೂರ್ ರನ್ನು ಗೃಹಸಚಿವಾಲಯದ ಪಾರ್ಲಿಮೆಂಟರಿ ಸಲಹಾ ಸಮಿತಿಯಿಂದ ಹೊರಹಾಕಲಾಗಿತ್ತು. ಲೋಕಸಭೆಯ ವಿಶೇಷ ಪ್ರೊಟೆಕ್ಷನ್ ಗ್ರೂಪ್ (ಎಸ್‍ಪಿಜಿ) ತಿದ್ದು ಪಡಿ ಮಸೂದೆ ಚರ್ಚೆಯ ವೇಳೆ ಪ್ರಜ್ಞಾ ಸಿಂಗ್ ಗೋಡ್ಸೆಯನ್ನು ದೇಶ ಭಕ್ತ ಎಂದು ಕರೆದಿದ್ದರು. ಇದು ಪ್ರತಿಪಕ್ಷದ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಪ್ರಜ್ಞಾ ಸಿಂಗ್‍ರ ಹೇಳಿಕೆಯನ್ನು ಸದನದ ಕಡತಗಳಿಂದ ಸ್ಪೀಕರ್ ತೆರವುಗೊಳಿಸಿದರು.