ಪಾಟ್ನ, ಮಾ. 20: ಬಿಜೆಪಿಯೊಂದಿಗೆ ಮುನಿಸಿಕೊಂಡಿರುವ ಸಂಸದ ಶತ್ರುಘ್ನ ಸಿನ್ಹಾ ಬುಧವಾರ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು ಅವರು ತಮ್ಮ ಸ್ವಕ್ಷೇತ್ರ ಪಾಟ್ನಾ ಸಾಹಿಬ್ ಲೋಕ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿನಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಪಾಟ್ನಾ ಸಾಹಿಬ್ನಲ್ಲಿ ಶತ್ರುಘ್ನರ ಬದಲು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ರಿಗೆ ಟಿಕೆಟು ನೀಡುವ ಕುರಿತು ಬಿಜೆಪಿಯೊಳಗೆ ಚರ್ಚೆಯಲ್ಲಿದೆ. ಕಳೆದ ಕೆಲವು ಸಮಯಗಳಿಂದ ಅವರು ಬಿಜೆಪಿ ಮತ್ತು ನರೇಂದ್ರ ಮೋದಿಯ ಪ್ರಧಾನ ಟೀಕಾಕಾರಾಗಿ ಬದಲಾಗಿದ್ದಾರೆ. ವಿಪಕ್ಷಗಳು ನಡೆಸಿದ ರ್ಯಾಲಿಯಲ್ಲಿ ಭಾಗವಹಿಸಿ ಅವರು ಸ್ವಪಕ್ಷ ಮತ್ತು ಪ್ರಧಾನಿಯ ವಿರುದ್ಧ ಗುಡುಗಿದ್ದರು.
ಅವರು ಇತ್ತೀಚೆಗೆ ತಾನು ಬಿಜೆಪಿ ತೊರೆಯುವ ಕುರಿತು ಸೂಚನೆಯನ್ನು ನೀಡಿದ್ದಾರೆ. ಯಾವ ಭರವಸೆ ನೀಡಲಾಯಿತೊ ಅದನ್ನು ಈವರೆಗೂ ಈಡೇರಿಸಲಾಗಿಲ್ಲ. ಶೀಘ್ರದಲ್ಲಿ ಭರವಸೆಗಳು ಈಡೇರಿಸಲ್ಪಡಬಹುದೆಂದು ತನ್ನಲ್ಲಿ ನಿರೀಕ್ಷೆಯಿದೆ ಎಂದು ಹೇಳಿದ್ದರು. ಪ್ರೀತಿಸುವವರು ಕಡಿಮೆಯಾಗಲಾರರು. ಬಹುಶಃ ನಿಮ್ಮ ಮೆಹಫಿಲ್ನಲ್ಲಿ ನಾವಿರಲಾರೆವು ಎಂದು ಕೂಡ ಟ್ವೀಟಿಸಿದ್ದರು.