ಬ್ಯಾಂಕ್ ದೋಚಲು ಯತ್ನಿಸಿದ ಕಳ್ಳರಿಗೆ ಜನರ ಗುಂಪಿನಿಂದ ಮಾರಣಾಂತಿಕ ಹಲ್ಲೆ

0
418

ಜಾನ್‍ಪುರ, ಜು. 8: ಉತ್ತರ ಪ್ರದೇಶದ ಜಾನ್‍ಪುರದಲ್ಲಿ ಕಳ್ಳತನಕ್ಕೆ ಯತ್ನಿಸಿದ ಮೂವರು ಯುವಕರಿಗೆ ಜನರ ಗುಂಪು ಕ್ರೂರವಾಗಿ ಹೊಡೆದಿದೆ. ಇವರು ಯೂನಿಯನ್ ಬ್ಯಾಂಕ್‍ನ ಕಸ್ಟಮರ್ ಸರ್ವಿಸ್ ಸೆಂಟರ್ ನಲ್ಲಿ ಕಳ್ಳತನಕ್ಕೆ ಯತ್ನಿಸಿದವರು ಎಂದು ಪೊಲೀಸರು ತಿಳಿಸಿದರು. ಕಳ್ಳತನ ಯತ್ನಿಸುವಾಗ ಒಬ್ಬನನ್ನು ಭದ್ರತಾ ಗಾರ್ಡ್ ಮತ್ತು ಊರವರು ಸೇರಿ ಹಿಡಿದರು. ಈತನನ್ನು ಪ್ರಶ್ನಿಸಿದಾಗ ಇನ್ನಿಬ್ಬರ ವಿವರ ತಿಳಿಯಿತು. ಊರವರು ಇವರನ್ನು ಕೂಡ ಹಿಡಿದು ಹಿಗ್ಗಾಮುಗ್ಗಾ ಥಳಿಸಿದರು.

ಮೂವರನ್ನು ನಗ್ನಗೊಳಿಸಿ ನೆಲದಲ್ಲಿ ಕುಳ್ಳಿರಿಸಿ ಹೊಡೆಯುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನಂತರ ಪೊಲೀಸರು ಬಂದು ಕಳ್ಳರನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಕಳ್ಳತನ ಯತ್ನ ಮತ್ತು ಯುವಕರನ್ನು ಹೊಡೆದ ಘಟನೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದ್ದು ಜಾನ್‍ಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್ಪಿ ವಿಪಿನ್ ಕುಮಾರ್ ಹೇಳಿದರು.