ಪ್ರವಾದಿ(ಸ)ರನ್ನು ಅನುಸರಿಸುವವರೇ ನೈಜ್ಯ ಪ್ರವಾದಿ ಪ್ರೇಮಿಗಳು; ರಿಯಾಝ್ ಅಹ್ಮದ್ ರೋಣ

0
166

ಸನ್ಮಾರ್ಗ ವಾರ್ತೆ

ಕೋಲಾರ: ‘ಪ್ರವಾದಿಯವರ ಆಜ್ಞೆ ಆದೇಶಗಳನ್ನು ಮೈಗೂಡಿಸಿಕೊಂಡು ಬದುಕಿದಾಗ ಒಬ್ಬ ಮನುಷ್ಯನು ಇಹಪರಗಳಲ್ಲಿ ಯಶಸ್ವಿ ಸಾಧಿಸಲು ಸಾಧ್ಯ. ಪ್ರವಾದಿ ಮುಹಮ್ಮದ್ (ಸ) ಅವರನ್ನು ಅನುಸರಿಸುವವರು ಮಾತ್ರ ನಿಜವಾಗಿ ಪ್ರವಾದಿಯನ್ನು ಪ್ರೀತಿಸುವವರಾಗಿರುತ್ತಾರೆ ಎಂದು ರಿಯಾಝ್ ಅಹ್ಮದ್ ರೋಣ ಕಾರ್ಯದರ್ಶಿ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಹೇಳಿದರು.

ಅವರು ಅಂಜುಮನ್ ಇಸ್ಲಾಮಿಯಾ ಕೋಲಾರ ವತಿಯಿಂದ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸೀರತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ನಿಖಿಲ್ ಬಿ. ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಸಂದರ್ಭದಲ್ಲಿ ಎಲ್ಲ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.

ಮೌಲಾನಾ ಕಲೀಮುಲ್ಲಾಹ್ ಬಾಕ್ವಿ ಕಾಸ್ಮಿ ಹಾಗೂ ಮೌಲಾನಾ ಮುಹಮ್ಮದ್ ಅಲಿ‌ ಬರಕಾತಿ, ಇಮಾಮ್ ವ ಖತೀಬ್ ಮಸ್ಜಿದೆ ಹಝ್ರತೆ ಕುತುಬ್ ಗೌರಿ ಈ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ (ಸ) ಜೀವನ ಮತ್ತು ಸಂದೇಶದ ಕುರಿತು ಸವಿಸ್ತಾರವಾಗಿ ಮಾತನಾಡಿದರು. ಕೆ.ಎಂ ಝಮೀರ್ ಅಹ್ಮದ್ ಅಧ್ಯಕ್ಷರು, ಅಂಜುಮನೆ ಇಸ್ಲಾಮಿಯಾ ಕೋಲಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.