ಮಾದಕ ವ್ಯಸನ ವಿರೋಧಿ ಅಭಿಯಾನ: ಸಾಲಿಡಾರಿಟಿ, ಡಾ. ಎ.ವಿ ಬಾಳಿಗ ಮೆಮೋರಿಯಲ್ ಆಸ್ಪತ್ರೆ ವತಿಯಿಂದ ಪತ್ರಿಕಾಗೋಷ್ಟಿ

0
166

ಸನ್ಮಾರ್ಗ ವಾರ್ತೆ

ಕಾಪು: ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಕಾಪು, ಡಾ.ಎ.ವಿ ಬಾಳಿಗ ಮೆಮೋರಿಯಲ್ ಆಸ್ಪತ್ರೆ ಹಾಗೂ ನಶಾ ಮುಕ್ತ ಅಭಿಯಾನ ಉಡುಪಿ ಜಿಲ್ಲಾ ವತಿಯಿಂದ ಆಗಸ್ಟ್ 7 ರಿಂದ 31 ವರೆಗೆ ಹಮ್ಮಿಕೊಂಡಿರುವ ಮಾದಕ ವ್ಯಸನ ವಿರೋಧಿ ಅಭಿಯಾನದ ಕುರಿತು ಕಾಪು ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ ಡಾ. ಪಿ.ವಿ ಭಂಡಾರಿ, ವಕೀಲರಾದ ಅಸದುಲ್ಲಾ ಕಟಪಾಡಿ, ಸಾಮಾಜಿಕ ಕಾರ್ಯಕರ್ತರಾದ ಅನ್ವರ್ ಅಲಿ ಕಾಪು, ರಫೀಕ್ ಕಾಪು, ಸಾಲಿಡಾರಿಟಿಯ ಉಡುಪಿ ಜಿಲ್ಲಾ ಸಂಚಾಲಕರಾದ ಯಾಸೀನ್ ಕೋಡಿಬೆಂಗ್ರೆ, ಜಿಲ್ಲಾ ಕಾರ್ಯದರ್ಶಿ ನಬೀಲ್ ಗುಜ್ಜರ್ ಬೆಟ್ಟು, ಕಾಪು ತಾಲೂಕು ಅಧ್ಯಕ್ಷರಾದ ರಂಝಾನ್, ಬದ್ರುದ್ದೀನ್, ಪರ್ವೇಝ್ ಉಡುಪಿ, ಅಬ್ದುಲ್ ರಹೀಮ್ ಉಪಸ್ಥಿತರಿದ್ದರು.