ಮೀರತ್, ಜೂ. 24: ಅನಾರೋಗ್ಕಕ್ಕೀಡಾದ ಪತ್ನಿಯನ್ನು ಆಂಬುಲೆನ್ಸ್ ಸಿಗದೇ ವ್ಯಕ್ತಿಯೊಬ್ಬರು ಸೈಕಲ್ನಲ್ಲಿ ಮಂಚವಿಟ್ಟು ಅದರಲ್ಲಿ ಮಲಗಿಸಿ ಕರೆದೊಯ್ದಿದ್ದಾರೆ. ಶಾಮಲಿ ಮೊಹಲ್ಲಾದ ಬಾಬಿ ತನ್ನ ಲಕ್ವಾ ಪೀಡಿತ ಪತ್ನಿ ಅಂಜೂ(36)ರನ್ನು ಈ ರೀತಿ ಕರೆದೊಯ್ದಿದ್ದಾರೆ. ಮಂಚದಲ್ಲಿ ಮಲಗಿಸಿ ಸೈಕಲ್ ನಲ್ಲಿ ಕರೆದುಕೊಂಡು ಹೋದದ್ದರಿಂದ ಮಹಿಳೆಯ ಸೊಂಟದಲ್ಲಿ ಗಾಯವಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಮತ್ತು ಔಷಧ ಕೊಟ್ಟು ಕಳುಹಿಸಿದ್ದಾರೆ. ಆಗಲೂ ಆಂಬುಲೆನ್ಸ್ ಒದಗಿಸಿಲ್ಲ. ಆದ್ದರಿಂದ ಬಾಬಿ ಪತ್ನಿಯನ್ನು ಪುನಃ ಸೈಕಲ್ನಲ್ಲಿ ಮಂಚವಿರಿಸಿ ಅದರಲ್ಲಿ ಮಲಗಿಸಿ ಮನೆಗೆ ಕರೆದುಕೊಂಡು ಬಂದರು ಎಂದು ವರದಿ ತಿಳಿಸಿದೆ. ಆದರೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಮೇಶ್ ಚಂದ್ರರು ಆಂಬುಲೆನ್ಸ್ ಒದಗಿಸಿಲ್ಲ ಎನ್ನುವುದನ್ನು ನಿರಾಕರಿಸಿದ್ದಾರೆ. ಕುಟುಂಬದವರು ಆಂಬುಲೆನ್ಸ್ ಕೇಳಿಲ್ಲ. ಅವರು ಆಂಬುಲೆನ್ಸ್ ಕೇಳಿದ್ದರೆ ವ್ಯವಸ್ಥೆ ಮಾಡಲಾಗುತ್ತಿತ್ತು ಎಂದಿದ್ದಾರೆ. ಪ್ರಕರಣ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿದ್ದು ನಂತರ ಎಸ್ಎಂಓ ತನಿಖೆ ನಡೆಸಿದ್ದಾರೆ. ಆಂಬುಲೆನ್ಸನ್ನು ನಾವು ಕೇಳಿಲ್ಲ ಎಂದು ಕುಟುಂಬದವರು ತನಗೆ ತಿಳಿಸಿದರೆಂದು ಎಸ್ಎಂಓ ಡಾ.ಕೆ.ಪಿ. ಸಿಂಗ್ ಹೇಳಿದ್ದಾರೆ.