ಎಪಿಸಿಆರ್ ದ.ಕ. ಜಿಲ್ಲೆಯ ನೂತನ ಅಧ್ಯಕ್ಷರಾಗಿ ಅಡ್ವೋಕೇಟ್ ಅಬ್ದುರ್ರಝಾಕ್ ಸರ್ಮದ್ ಆಯ್ಕೆ

0
985

ಸನ್ಮಾರ್ಗ ವಾರ್ತೆ

ಮಂಗಳೂರು: ನಾಗರಿಕರ ಹಕ್ಕುಗಳ ಸಂಘಟನೆಯಾದ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ನ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಅಡ್ವೋಕೇಟ್ ಅಬ್ದುರ್ರಝಾಕ್ ಸರ್ಮದ್ ಆಯ್ಕೆಯಾಗಿದ್ದಾರೆ.

ಎಪಿಸಿಆರ್ ನ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾದ ಅಡ್ವೋಕೇಟ್ ಉಸ್ಮಾನ್ ಹಾಗೂ ಕಾರ್ಯದರ್ಶಿ ನಿಯಾಜ್ ರವರ ನೇತೃತ್ವದಲ್ಲಿ ಮಂಗಳೂರಿನಲ್ಲಿಂದು ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಜಿಲ್ಲಾ ಕಾರ್ಯದರ್ಶಿಯಾಗಿ ಇರ್ಷಾದ್ ವೇಣೂರು, ಕೋಶಾಧಿಕಾರಿಗಳಾಗಿ ಅಮೀನ್ ಅಹ್ಸನ್, ಜೊತೆ ಕಾರ್ಯದರ್ಶಿಯಾಗಿ ಅರಫಾ ಮಂಚಿಯವರನ್ನು ಆಯ್ಕೆ ಮಾಡಲಾಯಿತು.

ಇದೇ ವೇಳೆ ಜಿಲ್ಲಾ ಸಮಿತಿಗೆ ಅಡ್ವೋಕೇಟ್ ಸಿರಾಜ್, ಅಡ್ವೋಕೇಟ್ ಅಬೂಬಕ್ಕರ್ ಸಿದ್ದೀಕ್, ಅಡ್ವೋಕೇಟ್ ಸರ್ಫರಾಜ್, ನಿಹಾಲ್ ಕುದ್ರೋಳಿ, ಶಬ್ಬೀರ್ ಅಹ್ಮದ್, ವಾಸಿಫ್ ಕೋಟೆಕಾರ್, ಅಶ್ರಫ್ ಸುಳ್ಯ, ಮುನೀರ್ ಕಲ್ಲಾಡಿ, ಅಮಿನ ಮುಶೀರಾ, ಝಿನೆರಾ, ಅಡ್ವೋಕೇಟ್ ರೈಹಾನ, ಸಲೀಂ ಬೋಳಂಗಡಿ, ರಫೀಕ್ ಪುತ್ತೂರು ರವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಎಪಿಸಿಆರ್ ನ ರಾಜ್ಯ ಕೋಶಾಧಿಕಾರಿ ಅಡ್ವೋಕೇಟ್ ಸಲಾಂ, ಜಮಾಅತೆ ಇಸ್ಲಾಮಿ ಹಿಂದ್ ನ ಮಂಗಳೂರು ನಗರ ಸಂಚಾಲಕ ಕೆ. ಎಂ. ಅಶ್ರಫ್ ಉಪಸ್ಥಿತರಿದ್ದರು.