ಸನ್ಮಾರ್ಗ ವಾರ್ತೆ
ಬೆಂಗಳೂರು,ಡಿ.3: ಬಿಜೆಪಿ ಶಾಸಕನ ಒದೆ ಬಿದ್ದು ಗರ್ಭಪಾತವಾಗಿದೆ ಎಂದು ಬಿಜೆಪಿ ಮಹಿಳಾ ಕೌನ್ಸಿಲರ್ ನಷ್ಟಪರಿಹಾರ ಕೇಳಿದ್ದಾರೆ. ಕರ್ನಾಟಕದ ತೆರದಾಳದ ಬಿಜೆಪಿ ಶಾಸಕ ಸಿದ್ದು ಸವದಿಯ ವಿರುದ್ಧ ಕೌನ್ಸಿಲರ್ ಚಾಂದ್ನಿ ನಾಯಕ್ ನಷ್ಟ ಪರಿಹಾರ ಕೋರಿದ್ದು ಕಳೆದ ನವೆಂಬರಿನಲ್ಲಿ ಘಟನೆ ನಡೆದಿತ್ತು.
ನವೆಂಬರ್ 9ರಂದು ಮಹಾಲಿಂಗ ಪುರದ ಮುನ್ಸಿಪಲ್ ಕೌನ್ಸಿಲ್ ಬಿಲ್ಡಿಂಗ್ನಲ್ಲಿ ಚಾಂದ್ನಿಯ ಸಹಿತ ಕೌನ್ಸಿಲರ್ ಮೇಲೆ ಶಾಸಕರು ಮತ್ತು ಸಂಗಡಿಗರು ಎಳೆದಾಡಿದ್ದರು. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗಿತ್ತು. ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಚಾಂದ್ನಿಯ ಪತಿ ತಿಳಿಸಿದರು.
ಆದರೆ, ಶಾಸಕರು ಆರೋಪವನ್ನು ನಿರಾಕರಿಸಿದ್ದಾರೆ. ಕೌನ್ಸಿಲರ್ ಆರು ವರ್ಷಗಳ ಹಿಂದೆ ಕುಟುಂಬ ಯೋಜನೆ ಮಾಡಿಸಿಕೊಂಡಿದ್ದರು. ಇತ್ತೀಚೆಗೆ ಅವರು ಗರ್ಭಪಾತ ಮಾಡಿಸಿಕೊಂಡಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಶಾಸಕರು ಹೇಳಿದ್ದಾರೆ. ಘಟನೆಯಲ್ಲಿ ಕ್ರಮ ಜರಗಿಸಬೇಕೆಂದು ಆಗ್ರಹಿಸಿ ಮಹಿಳಾ ಕಾಂಗ್ರೆಸ್ ರಂಗಪ್ರವೇಶಿಸಿದೆ.