ಬೆಂಗಳೂರು: ಬಂಟರ ಸಂಘದ ಮತ್ತು ಬಂಟ್ಸ್ ಸೇವಾದಳ ಜಂಟಿ ಆಶ್ರಯದಲ್ಲಿ ನೆತ್ತರ ನೆರವು-ರಕ್ತದಾನ ಶಿಬಿರ

0
221

ಸನ್ಮಾರ್ಗ ವಾರ್ತೆ

ಬಂಟರ ಸಂಘ, ಬೆಂಗಳೂರಿನ ಸಮಾಜ ಸೇವಾ ಸಮಿತಿ ಮತ್ತು ಬಂಟ್ಸ್ ಸೇವಾದಳ ಜಂಟಿಯಾಗಿ ನಾರಾಯಣ ಹೃದಯಾಲಯದ ಸಹಯೋಗದೊಂದಿಗೆ ಅಕ್ಟೋಬರ್‌ 2 ರಂದು “ನೆತ್ತರ ನೆರವು – ರಕ್ತದಾನ ಶಿಬಿರ”ವನ್ನು ಹಮ್ಮಿಕೊಳ್ಳಲಾಯಿತು.

ನಾವು ರಕ್ತದಾನ ಮಾಡಿ ಎಂದು ಹೇಳಿದಾಗ, ತುಂಬಾ ದಿನಗಳ ರಜೆಯ ಸಂದರ್ಭವಾದರೂ ತಾವೆಲ್ಲರೂ ನಮ್ಮ ಜೊತೆಗೂಡಿ, 203 ಯೂನಿಟ್ ರಕ್ತವನ್ನು ಸಂಗ್ರಹಿಸಲು ಸಹಕರಿಸಿದಿರಿ. ಇದರಿಂದ ನಾವೆಲ್ಲರೂ ಒಂದಷ್ಟು ಜನರ ಜೀವ ಉಳಿಸುವ ಕಾರ್ಯದಲ್ಲಿ ಭಾಗಿಯಾದೆವು ಎಂದು ಸಂಘಟಕರು ಸಂತಸ ವ್ಯಕ್ತಪಡಿಸಿದರು.

ನಾರಾಯಣ ನೇತ್ರಾಲಯದ ಸಹಕಾರದೊಂದಿಗೆ ನಡೆದ ನೇತ್ರದಾನ ನೋಂದಣಿ ಶಿಬಿರದಲ್ಲಿ 75ಕ್ಕೂ ಹೆಚ್ಚು ಜನರು ನೇತ್ರದಾನ ನೋಂದಣಿಯನ್ನು ಮಾಡಿಕೊಂಡರು.

ಈ ಕಾರ್ಯಕ್ರಮ ಯಶಸ್ವಿಗಾಗಿ ಶ್ರಮಿಸಿದ ಎಲ್ಲರಿಗೂ ಸಂಘಟಕರು ಧನ್ಯವಾದ ಅರ್ಪಿಸಿದರು.