ಸನ್ಮಾರ್ಗ ವಾರ್ತೆ
ನವದೆಹಲಿ: ‘ಪತ್ರಿಕೋದ್ಯಮದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಕ್ಕಾಗಿ ‘ಚಪ್ಪಲ್ ಅವಾರ್ಡ್’ ಅನ್ನು ನೀಡಲು ನಿರ್ಮಾಪಕ ಅನುರಾಗ್ ಕಶ್ಯಪ್ ಹಾಗೂ ಹಾಸ್ಯಗಾರ ಕುನಾಲ್ ಸೇರಿ ರಿಪಬ್ಲಿಕ್ ಟಿವಿ ಕಛೇರಿಗೆ ತೆರಳಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಲನಚಿತ್ರ ನಿರ್ಮಾಪಕ ಕಶ್ಯಪ್ ಅರ್ನಬ್ ಅವರನ್ನು ಸಂದರ್ಶಿಸುವ ಹಳೆಯ ವೀಡಿಯೊವನ್ನು ಹಂಚಿಕೊಂಡಿದ್ದು, “ನಾನು … ಈ ಸ್ಟುಡಿಯೊದಲ್ಲಿ ತಾವು ಉಪಸ್ಥಿತರಾಗಿರುವುದಕ್ಕೆ ಹೆಮ್ಮೆಪಡುತ್ತೇನೆ, … ಬಹಳ ಪ್ರತಿಭಾವಂತ ಅನುರಾಗ್ ಕಶ್ಯಪ್” ಎಂದು ಅರ್ನಬ್ ವೀಡಿಯೊದಲ್ಲಿ ಹೇಳಿದ್ದನ್ನು ಕಾಣಬಹುದು. ಅಲ್ಲದೇ, ಇದೇ ವಿಡಿಯೋದಲ್ಲಿ ನಂತರ ‘ಚಪ್ಪಲ್ ಪ್ರಶಸ್ತಿ’ಯೊಂದಿಗೆ ಅರ್ನಬ್ ಅವರ ಕಚೇರಿಗೆ ಭೇಟಿ ನೀಡುವುದನ್ನು ಕಶ್ಯಪ್ ಹಂಚಿಕೊಂಡಿದ್ದು, “ಯಾರು ಇದನ್ನು ಮಾಡಿದರು?” ಎಂಬುದಾಗಿ ಟ್ವೀಟ್ ಮಾಡಿದ್ದಾರೆ.
ರಿಪಬ್ಲಿಕ್ ಟಿವಿ ಟಿಆರ್ಪಿ ಹೆಚ್ಚಿಸಲು ಸುಶಾಂತ್ ಸಾವಿನ ಹಾಗೂ ರಿಯಾ ಚಕ್ರವರ್ತಿ ಕುರಿತು ಸುಳ್ಳಿನ ಕಂತೆಗಳನ್ನು ಬಿತ್ತರಿಸುತ್ತಿದೆ ಎಂಬುದಾಗಿ ಆರೋಪಗಳು ಕೇಳಿ ಬರುತ್ತಿವೆ. ಅರ್ನಬ್ರ ವರ್ತನೆಯಿಂದ ಬೇಸತ್ತು ಇಬ್ಬರು ಪತ್ರಕರ್ತರು ರಿಪಬ್ಲಿಕ್ ಟಿವಿಗೆ ರಾಜೀನಾಮೆ ನೀಡಿದ ಬಳಿಕ ರಿಪಬ್ಲಿಕ್ ಟಿವಿ ಭಾರೀ ಚರ್ಚೆಗೊಳಗಾಗುತ್ತಿದೆ.
Who did this ?? pic.twitter.com/UZ13bAVMlG
— Anurag Kashyap (@anuragkashyap72) September 11, 2020
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.