ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪರವರ ಗ್ರಾಮದಲ್ಲೇ ಅಕ್ರಮ ದಾಸ್ತಾನು ಸ್ಪೋಟಕ್ಕೆ ಕಾರ್ಮಿಕರು ಬಲಿ; ಇದಕ್ಕೆ ಸಚಿವರೇ ನೇರ ಹೊಣೆ: FITU ಆಪಾದನೆ

0
612

ಸನ್ಮಾರ್ಗ ವಾರ್ತೆ

ಬೆಂಗಳೂರು: ಅಕ್ರಮ ಕಲ್ಲು ಗಣಿಗಾರಿಕೆಯನ್ನು ಹೊಂದಿರುವ ಶಿವಮೊಗ್ಗದಲ್ಲಿನ ಅಬ್ಬಳಕೆರೆ ಎಂಬ ಪ್ರದೇಶದಲ್ಲಿ ಬೇಜಬ್ದಾರಿಯುತವಾಗಿ, ಸಂಗ್ರಹಿಸಿಟ್ಟ ಸ್ಪೋಟಕ ವಸ್ತುಗಳು ಸಿಡಿದ ಕಾರಣ ಹತ್ತಕ್ಕಿಂತ ಹೆಚ್ಚು ಬಡಕಾರ್ಮಿಕರು ಮೃತಪಟ್ಟಿರುವ ದುರಂತದ ಬಗ್ಗೆ ತಮ್ಮ ಅತೀವ ದುಃಖವನ್ನು ವ್ಯಕ್ತಪಡಿಸಿದ ಎಫ್. ಐ. ಟಿ. ಯು. ರಾಜ್ಯಾದ್ಯಕ್ಷರಾದ ಸುಲೈಮಾನ್ ಕಲ್ಲರ್ಪೆಯವರು, ಇಷ್ಟೊಂದು ಸಾವು ನೋವುಗಳಿಗೆ ಕಾರಣವಾದ ಆಡಳಿತ ವರ್ಗದ ಹೊಣೆಗೇಡಿತನಕ್ಕಾಗಿ ರಾಜ್ಯ ಸರ್ಕಾರವನ್ನು ಅವರು ಖಂಡಿಸಿದರು.

ಇದು ನಮ್ಮ ರಾಜ್ಯದ, ಗ್ರಾಮೀಣಾಭಿವೃದ್ಧಿ ಸಚಿವರಾದ ಮಾನ್ಯ ಈಶ್ವರಪ್ಪರವರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗ್ರಾಮೀಣ ಪ್ರದೇಶವಾಗಿದ್ದು ಇಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಈ ಘಟನೆ ಸಂಭವಿಸಿದ್ದು ಇಲ್ಲಿ ಯಾವುದೇ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳದೆ ಇಷ್ಟೊಂದು ಸ್ಪೋಟಕ ವಸ್ತುಗಳನ್ನು ಸಂಗ್ರಹಿಡಲು ಅನುಮತಿ ನೀಡಿದ ಸರಕಾರಿ ಅಧಿಕಾರಿಗಳು ಮಾತ್ರವಲ್ಲದೆ ಸ್ಥಳೀಯ ಶಾಸಕರೂ, ಸಚಿವರೂ ಆಗಿರುವ ಈಶ್ವರಪ್ಪನವರು ನೇರ ಹೊಣೆಯಾಗಿರುವ ಕಾರಣ ಇವರು ಕೇವಲ ಸಂತಾಪ ಸೂಚಿಸಿ ಪಲಾಯನ ಮಾಡಲಾಗದು, ಇವರಿಗೆ ಕಾರ್ಮಿಕರ ಬಗ್ಗೆ ನೈಜ ಕಾಳಜಿ ಮತ್ತು ರಾಜಕೀಯ ನೈತಿಕತೆ ಇದ್ದಲ್ಲಿ ಸಾವಿಗೀಡಾಗಿರುವ ಕಾರ್ಮಿಕರ ಕುಟುಂಬಕ್ಕೆ ಜುಜುಬಿ ಪರಿಹಾರ ನೀಡಿ ಕಣ್ಣೊರೆಸುವ ಪ್ರಹಸನ ಮಾಡದೆ ಸರಿಯಾದ ಪರಿಹಾರ ಒದಗಿಸಿ ಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಮಿಕರು ದೇಶದ ಅಭಿವೃದ್ಧಿಯ ಯೋಧರಾಗಿದ್ದಾರೆ. ಇಂತಹ ಮುಗ್ಧ ಕಾರ್ಮಿಕರನ್ನು ಅಕ್ರಮ ಕೆಲಸಗಳಲ್ಲಿ ತೊಡಗಿಸಿಕೊಳ್ಳವುದು ಮಹಾ ಅಪರಾಧವಾಗಿದೆ. ಆದ್ದರಿಂದ ಕೇವಲ ಗಣಿ ಕೋರೆಯ ಮಾಲಕರನ್ನು ಮಾತ್ರ ವಿಚಾರಣೆ ನಡೆಸಿ ಹರಕೆ ತೀರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ, ಬದಲಾಗಿ ಆ ಪ್ರದೇಶಕ್ಕೆ ಸಂಬಂಧಿಸಿದ ಎಲ್ಲಾ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸಿ ಸೂಕ್ತ ಶಿಕ್ಷೆ ವಿಧಿಸಬೇಕಾಗಿದೆ ಎಂದು ‍ಅವರು ತಿಳಿಸಿದರು.