ಮಹಾರಾಷ್ಟ್ರದ ಭಿವಂಡಿಯಲ್ಲಿ ನಾಲ್ಕು ಮಹಡಿ ಕಟ್ಟಡ ಕುಸಿತ: ಇಬ್ಬರ ಸಾವು

0
386

ಸನ್ಮಾರ್ಗ ವಾರ್ತೆ

ಮುಂಬೈ, ಆ. 24: ಮಹಾರಾಷ್ಟ್ರದ ಭಿವಂಡಿಯಲ್ಲಿ ನಾಲ್ಕು ಮಹಡಿ ಕಟ್ಟಡ ಕುಸಿದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಸಿರಾಜ್ ಅಹ್ಮದ್ ಅನ್ಸಾರಿ (23), ಅಕಿಬ್ ಅನ್ಸಾರಿ (22) ಮೃತಪಟ್ಟವರು. ಕುಸಿದ ಕಟ್ಟಡದ ಅಡಿಯಲ್ಲಿ ಹದಿನೈದರಷ್ಟು ಮಂದಿ ಇದ್ದಾರೆ ಎಂದು ವರದಿಯು ತಿಳಿಸಿದೆ. ರಾಷ್ಟ್ರೀಯ ದುರಂತ ನಿವಾರಣಾ ಸೇನೆಯ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಶನಿವಾರ ಬೆಳಗ್ಗೆ ಭಿವಂಡಿಯ ಶಾಂತಿನಗರದಲ್ಲಿ ಆಕಸ್ಮಿಕ ಬೆಂಕಿ ಉಂಟಾಯಿತು.

ಎಂಟು ವರ್ಷ ಹಳೆಯ ಕಟ್ಟಡ ಕಾನೂನು ಬಾಹಿರವಾಗಿ ಕಟ್ಟಲಾಗಿತ್ತು ಎಂದು ಅಧಿಕಾರಿಗಳು ಹೇಳಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡದಲ್ಲಿದ್ದ ಜನರನ್ನು ತೆರವುಗೊಳಿಸಲಾಗಿತ್ತು. ಅನಧಿಕೃತವಾಗಿ ವಾಸವಿದ್ದವರು ಅಪಘಾತಕ್ಕೆ ತುತ್ತಾಗಿದ್ದಾರೆ ಎಂದು ಭಿವಂಡಿ-ನಿಸಾಂಪುರ ಮುನ್ಸಿಪಲ್ ಕಾರ್ಪೊರೇಷನ್‍ನ ಅಶೋಕ್ ರನ್‍ಖಾಬ್ ತಿಳಿಸಿದರು. ಬಹುಮಹಡಿ ಕಟ್ಟಡ ನಾಶವಾದ ಘಟನೆಯಲ್ಲಿ ತನಿಖೆ ಆರಂಭವಾಗಿದೆ.