ಸನ್ಮಾರ್ಗ ವಾರ್ತೆ
ಬೆಂಗಳೂರ: ಕರ್ನಾಟಕ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಸಹಿತ ನಿರ್ಣಾಯ ರಾಜಕೀಯ ಚಟುವಟಿಕೆಗಳ ನಡುವೆ ಪ್ರತಿಪಕ್ಷ ಪಾರ್ಟಿ ಜೆಡಿಎಸ್ ಅನ್ನು ಪ್ರಶಂಸಿ ದಿವಂಗತ ಅನಂತಕುಮಾರ್ ಪುತ್ರಿ ವಿಜೇತ ಟ್ವೀಟ್ ಮಾಡಿದ್ದಾರೆ. ಬಿಜೆಪಿ ದಿವಂಗತ ಅನಂತ್ ಕುಮಾರ್ರ ಕುಟುಂಬವನ್ನು ಕಡೆಗಣಿಸುತ್ತಿದೆ ಎಂದು ಪ್ರಚಾರದ ನಡುವೆ ದಿವಂಗತ ಅನಂತ್ ಕುಮಾರ್ ಮತ್ತು ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಪುತ್ರಿ ವಿಜೇತ ಜೆಡಿಎಸ್ಅನ್ನು ಹೊಗಳಿ ಟ್ವೀಟ್ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದ್ದು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಸ್ವಾಗತಿಸಿದ್ದಾರೆ.
ಕರ್ನಾಟಕದ ರಾಜಕೀಯದಲ್ಲಿ ಜೆಡಿಎಸ್ ಯಾಕೆ ಇಷ್ಟು ಗಮನಾರ್ಹವಾಗಿದೆ ಮತ್ತು ಅದು ಈಗಲೂ ಶಕ್ತಿಶಾಲಿ ರಾಜಕೀಯ ಪಾರ್ಟಿಯಾಗಿದೆ” ಎಂದು ವಿಜೇತ ಟ್ವೀಟ್ ಮಾಡಿದ್ದರು. ವಿಜೇತರ ಟ್ವೀಟ್ಅನ್ನು ಸ್ವಾಗತಿಸಿದ ಕುಮಾರ ಸ್ವಾಮಿ ತೇಜಸ್ವಿನಿ ಅನಂತಕುಮಾರ್ ಜೆಡಿಎಸ್ ಸೇರ್ಪಡೆಯಾಗಲು ಬಯಸುವುದಾದರೆ ಅವರನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಅನಂತ್ಕುಮಾರ್ರಿಗೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿತ್ತು. ಇದು ಕೂಡ ವಿಜೇತಾರ ಟ್ವೀಟ್ನ ನಂತರ ಚರ್ಚೆಯ ಮುನ್ನೆಲೆಗೆ ಬಂದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿಯವರ ಬದಲಿಗೆ ಯುವ ಮೋರ್ಚ ನಾಯಕ ತೇಜಸ್ವಿ ಸೂರ್ಯರಿಗೆ ಬಿಜೆಪಿ ಟಿಕೆಟ್ ಕೊಟ್ಟಿತ್ತು. ಆದರೆ, ಸುರೇಶ್ ಅಂಗಡಿ ನಿಧನರಾದಾಗ ಅವರು ಪ್ರತಿನಿಧಿಸುತ್ತಿದ್ದ ಬೆಳಗಾವಿಯಿಂದ ಅವರ ಪತ್ನಿ ಮಂಗಳಾ ಅಂಗಡಿಯವರಿಗೆ ಟಿಕೆಟ್ ಬಿಜೆಪಿ ನೀಡಿತ್ತು.