ಮಾಲೆಗಾಂವ್ ಸ್ಫೋಟ ಪ್ರಕರಣ: ವಿಚಾರಣೆ ಪುನರಾರಂಭ

0
571

ಸನ್ಮಾರ್ಗ ವಾರ್ತೆ

ಮುಂಬೈ,ಡಿ.3: ಭೋಪಾಲ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ಸೇನೆಯ ಇಂಟಲಿಜೆನ್ಸ್ ಅಧಿಕಾರಿ ಲೆಫ್ಟ್‌ನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಸಹಿತ ಆರೋಪಿಗಳಾಗಿರುವ 2008ರ ಮಾಲೆಗಾಂವ್ ಸ್ಪೋಟ ಪ್ರಕರಣದ ವಿಚಾರಣೆ ಪುನರಾರಂಭವಾಗಲಿದೆ. ಪ್ರಜ್ಞಾ, ಪುರೋಹಿತ್‌ರ ಸಹಿತ ಏಳು ಆರೋಪಿಗಳು ಗುರುವಾರ ಹಾಜರಾಗಬೇಕೆಂದು ವಿಶೇಷ ಎನ್‍ಐಎ ಕೋರ್ಟು ನ್ಯಾಯಾಧೀಶ ಪಿ.ಆರ್. ಸಿತ್ರೆ ಆದೇಶಿಸಿದ್ದಾರೆ.

ಸ್ಫೋಟದಲ್ಲಿ ಮೃತಪಟ್ಟವರ ಸಂಬಂಧಿಕರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ನಡುವೆ ನಿಂತುಹೋಗಿದ್ದ ವಿಚಾರಣೆ ಪುನರಾರಂಭಿಸಲು ತೀರ್ಮಾನಿಸಲಾಗಿದೆ. ಈ ಹಿಂದೆ ವಾದ ಆಲಿಸಿದ ಜಡ್ಜ್ ನಿವೃತ್ತರಾಗಿದ್ದು ಹಾಗೂ ಕೊರೋನ ವ್ಯಾಪಿಸಿದ್ದು ವಿಚಾರಣೆ ಸ್ಥಗಿತಗೊಳ್ಳಲು ಕಾರಣವೆಂಬುದಾಗಿ ವರದಿಯಾಗಿದೆ.