ಉ.ಪ್ರ: ಅಖಿಲೇಶ್‍ಗೆ ಬೆಂಬಲ ಸೂಚಿಸಿದ ತೃಣಮೂಲ ಕಾಂಗ್ರೆಸ್: ಪ್ರಚಾರ ನಡೆಸಲಿರುವ ಮಮತಾ ಬ್ಯಾನರ್ಜಿ

0
362

ಸನ್ಮಾರ್ಗ ವಾರ್ತೆ

ಕೊಲ್ಕತಾ: ಸಮಾಜವಾದಿ ಪಾರ್ಟಿಗೆ ತೃಣಮೂಲ ಕಾಂಗ್ರೆಸ್ ಬೆಂಬಲ ಸೂಚಿಸಿದ್ದು ಪ.ಬಂಗಾಳದ ಮುಖ್ಯಮಂತ್ರಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ವರದಿಯಾಗಿದೆ.

ಟಿಎಂಸಿ ಅಲ್ಲಿ ಸ್ಪರ್ಧಿಸುವುದಿಲ್ಲ ಬದಲಾಗಿ ಸಮಾಜವಾದಿ ಪಾರ್ಟಿಗಾಗಿ ಪ್ರಚಾರಕ್ಕಿಳಿಯುತ್ತದೆ ಎಂದು ಸಮಾಜವಾದಿ ಪಾರ್ಟಿ ಉಪಾಧ್ಯಕ್ಷ ಕಿರಣ್‍ಮಯಿ ನಂದ ತಿಳಿಸಿದ್ದಾರೆ.

ಕೊಲ್ಕತಾದಲ್ಲಿ ಮಮತಾ ಬ್ಯಾನರ್ಜಿಯವರ ವಸತಿಯಲ್ಲಿ ಒಂದು ಗಂಟೆ ಅವರು ಮಮತಾ ಬ್ಯಾನರ್ಜಿಯವರೊಡನೆ ಚರ್ಚಿಸಿದ್ದು, ನಂತರ ಪ್ರತಿಕ್ರಿಯೆ ನೀಡಿದ್ದಾರೆ. ಅಖಿಲೇಶ್‍ರಿಗಾಗಿ ಪ್ರಚಾರಕ್ಕೆ ಬರುವಂತೆ ನಂದ ಮಮತಾ ಬ್ಯಾನರ್ಜಿಯವರನ್ನು ಉತ್ತರ ಪ್ರದೇಶಕ್ಕೆ ಸ್ವಾಗತಿಸಿದ್ದಾರೆ.

ಬಿಜೆಪಿಯನ್ನು ಸೋಲಿಸುವ ಗುರಿಯೊಂದಿಗೆ ಅದು ಸಮಾಜವಾದಿ ಪಾರ್ಟಿಯನ್ನು ಬೆಂಬಲಿಸುತ್ತಿದೆ. ಲಕ್ನೊದಲ್ಲಿ ಮತ್ತು ವಾರಣಾಸಿಯಲ್ಲಿ ಅಖಿಲೇಶ್ ಯಾದವ್‍ರಿಗಾಗಿ ಮಮತಾ ಬ್ಯಾನರ್ಜಿ ವರ್ಚುವಲ್ ರ‌್ಯಾಲಿ ಆಯೋಜಿಸುವರು. ಫೆಬ್ರುವರಿ ಎಂಟಕ್ಕೆ ಅವರು ಲಕ್ನೊಕ್ಕೆ ಬಂದು ವರ್ಚುವಲ್ ಪ್ರಚಾರದಲ್ಲಿ ಭಾಗವಹಿಸುವರು. ಫೆಬ್ರುವರಿಯಲ್ಲಿ ಮಮತಾ ವಾರಣಾಸಿಗೆ ಭೇಟಿ ನೀಡುವರು. ಇದರ ದಿನಾಂಕ ಇದುವರೆಗೆ ನಿಗದಿಗೊಳಿಸಲಾಗಿಲ್ಲ ಎಂದು ತಿಳಿದು ಬಂದಿದೆ.