ನಿರುದ್ಯೋಗ: ಖಾಸಗಿ ಸ್ಕೂಲ್ ಬಸ್ ಚಾಲಕ ಆತ್ಮಹತ್ಯೆಗೆ ಶರಣು

0
557

ಸನ್ಮಾರ್ಗ ವಾರ್ತೆ

ತಿರುವನಂತಪುರಂ,ಜ.11: ಲಾಕ್‌ಡೌನ್‌ನಿಂದಾಗಿ ಖಾಸಗಿ ಶಾಲೆಯ ಆಡಳಿತ ಮಂಡಳಿಯು ಕೆಲಸದಿಂದ ತೆಗೆದು ಹಾಕಿದ್ದಕ್ಕಾಗಿ ನೊಂದು ಸ್ಕೂಲ್ ವ್ಯಾನ್ ಚಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶ್ರೀಕಾರ್ಯ ಎಂಬಲ್ಲಿನ ಶ್ರೀಕುಮಾರ್ ಶಾಲೆಯ ಸಮೀಪದಲ್ಲಿದ್ದ ಆಟೋ ರಿಕ್ಷಾಕ್ಕೆ ಹತ್ತಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಆಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರೂ ಶ್ರೀಕುಮಾರ್ ಬದುಕುಳಿಯಲಿಲ್ಲ.

ಲಾಕ್‍ಡೌನ್‍ನಿಂದ ಶ್ರೀಕುಮಾರ್ ಸಹಿತ ಸಿಬ್ಬಂದಿಗಳನ್ನು ಕೆಲಸದಿಂದ ಖಾಸಗಿ ಶಾಲೆಯವರು ತೆಗೆದು ಹಾಕಿದ್ದರು. ಇದು ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ.