ಮಧ್ಯಪ್ರದೇಶ| ಜಾನುವಾರುಗಳ ಸಂರಕ್ಷಣೆಗೆ ವಿಶೇಷ ‘ಕೌ ಕ್ಯಾಬಿನೆಟ್’- ಸಿಎಂ ಚೌಹಾನ್ ಘೋಷಣೆ

0
321

ಸನ್ಮಾರ್ಗ ವಾರ್ತೆ

ಭೋಪಾಲ,ನ.18: ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮಧ್ಯಪ್ರದೇಶದಲ್ಲಿ ಜಾನುವಾರುಗಳ ಅಭಿವೃದ್ಧಿ ಸಂರಕ್ಷಣೆಗಾಗಿ ವಿಶೇಷ ಕೌ ಕ್ಯಾಬಿನೆಟ್ ರೂಪಿಸುವುದಾಗಿ ಘೋಷಿಸಿದ್ದಾರೆ.

“ಜಾನುವಾರುಗಳಲ್ಲಿ, ಕಾಡು, ಪಂಚಾಯತ್-ಗ್ರಾಮೀಣ ಅಭಿವೃದ್ಧಿ, ರೆವೆನ್ಯೂ, ಕೃಷಿ ಅಭಿವೃದ್ಧಿ ಇಲಾಖೆಗಳು ಕೌ ಕ್ಯಾಬಿನೆಟ್‍ನಲ್ಲಿ ಸೇರಲಿವೆ. ಕೌ ಕ್ಯಾಬಿನೆಟ್‍ನ ಮೊದಲ ಸಭೆ ಗೋಪಾಷ್ಠಮಿ ದಿನ ನವೆಂಬರ್ 22ರಂದು 12 ಗಂಟೆಗೆ ನಡೆಯಲಿದೆ ಎಂದು ಚೌಹಾನ್ ತಿಳಿಸಿದರು.

‘ಕೌ ಕ್ಯಾಬಿನೆಟ್’ ಹೆಚ್ಚಿನ ವಿವರಗಳು ಮತ್ತು ಅಧಿಕಾರಗಳನ್ನು ಮುಂಬರುವ ದಿನಗಳಲ್ಲಿ ತಿಳಿದು ಬರಲಿದೆ.