ದೇಶದ ಹಿತಕ್ಕಾಗಿ ಅದಾನಿಯನ್ನು ಬೆಂಬಲಿಸುವೆ: ಶರದ್ ಪವಾರ್

0
200

ಸನ್ಮಾರ್ಗ ವಾರ್ತೆ

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರು ದೇಶದ ಅಭಿವೃದ್ಧಿಗಾಗಿ ಗೌತಮ್ ಅದಾನಿಯನ್ನು ಬೆಂಬಲಿಸುವುದಾಗಿ ಹೇಳಿದರು. ಅವರು ಗುಜರಾತ್‌ನಲ್ಲಿ ಅತಿದೊಡ್ಡ ಬಂದರನ್ನು ನಿರ್ಮಿಸಿದ್ದಾರೆ. ಇದು ರಾಜ್ಯದಲ್ಲಿ ಅನೇಕ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಹೇಳಿದರು. ಅವರು ಇಂಡಿಯಾ ಟುಡೇ ಕಾನ್ಕ್ಲೇವ್ ಮುಂಬೈ 2023 ರಲ್ಲಿ ಮಾತನಾಡುತ್ತಿದ್ದರು.

ನಾನು ಅಭಿವೃದ್ಧಿ ಪರವಾಗಿದ್ದೇನೆ. ಅಭಿವೃದ್ಧಿಯಲ್ಲಿ ಆಸಕ್ತಿ ಇರುವ ಯಾರನ್ನಾದರೂ ನಾನು ಬೆಂಬಲಿಸುವೆ ಎಂದು ಶರದ್ ಪವಾರ್ ಹೇಳಿದ್ದಾರೆ. ಗೌತಮ್ ಅದಾನಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ ನಂತರ, ಕಾರ್ಖಾನೆ ಉದ್ಘಾಟನಾ ಸಮಾರಂಭದಲ್ಲಿ ಪವಾರ್ ಅದಾನಿಯನ್ನು ಭೇಟಿಯಾಗಿದ್ದರು. ರಾಹುಲ್ ಗಾಂಧಿ ನನ್ನನ್ನು ಟೀಕಿಸುವುದಕ್ಕೆ ಸ್ವತಂತ್ಯರು. ಅವರು ತಮ್ಮದೇ ಆದ ಆಲೋಚನೆಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.