ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೆಂಪು ಕೋಟೆಯಲ್ಲಿ ಧ್ವಜ ಹಾರಿಸಿದ್ದು ದೀಪ್ ಸಿಧು ಎಂದು ರೈತರು ಹೇಳುತ್ತಿದ್ದು ಸಿಧುಗೆ ಬಿಜೆಪಿಯೊಂದಿಗೆ ನಿಕಟ ಸಂಬಂಧ ಇದೆ ಎಂದು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಟ್ವಿಟರ್ನಲ್ಲಿ ಪ್ರಧಾನಿ ಮೋದಿಯೊಂದಿಗೆ ಸಿಧು ನಿಂತಿರುವ ಫೋಟೊವನ್ನು ಟ್ವೀಟ್ ಮಾಡಿದ್ದಾರೆ.
ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ್ದು ದೀಪ್ ಸಿಧು ಎಂದು ಪ್ರಶಾಂತ್ ಭೂಷಣ್, ಹೇಳಿದ್ದು ಇದೇ ಆರೋಪವನ್ನು ರೈತ ಸಂಘಟನೆಗಳು ಎತ್ತಿವೆ.
ಭಾರತೀಯ ಕಿಸಾನ್ ಯೂನಿಯನ್ ಹರಿಯಾಣ ಘಟಕ ಅಧ್ಯಕ್ಷ ಗುರ್ನಾಮ್ ಸಿಂಗ್ ಸಿಧು ರೈತರು ತಪ್ಪುದಾರಿಗೆಳೆದು ಅಕ್ರಮಕ್ಕೆ ಎಸಗಿದರೆಂದು ಆರೋಪಿಸಿದ್ದರು.