ತಿರುರಂಗಾಡಿ,ಎ.12: ಮತಾಂತರಗೊಂಡ ದ್ವೇಷದಲ್ಲಿ ಆರೆಸ್ಸೆಸ್ ಕಾರ್ಯಕರ್ತರಿಂದ ಕೊಲೆಯಾಗಿದ್ದ ಕೊಡಿಂಞಿ ಫೈಝಲ್ ಎಂಬವರ ಸಹೋದರಿಯ ಮಕ್ಕಳಿಗೆ ಆರೆಸ್ಸೆಸ್ ಕಾರ್ಯಕತನೆನ್ನಲಾದ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ. ಘಟನೆ ನಂತರ ಫೈಝಲ್ರ ಸಹೋದರಿ ಮತ್ತು ಪುತ್ರರು ತಿರುರಂಗಾಡಿ ಸಿಐಗೆ ದೂರು ನೀಡಿದ್ದಾರೆ. ಇಸ್ಲಾಂ ಧರ್ಮ ಸ್ವೀಕರಿಸಿದ್ದಕ್ಕಾಗಿ ಎರಡು ವರ್ಷಗಳ ಹಿಂದೆ ಫೈಝಲ್ರನ್ನು ಹತ್ಯೆ ಮಾಡಲಾಗಿತ್ತು. ಆಮೇಲೆ ಪೈಝಲ್ರ ಕಿರಿಯ ಸಹೋದರಿ ಇಸ್ಲಾಮ್ ಸ್ವೀಕರಿಸಿದ್ದರು. ಇವರ ಪುತ್ರರಿಗೆ ಕೊಲೆ ಬೆದರಿಕೆ ಹಾಕಲಾಗಿದೆ.
ಕೊಲೆ ಬೆದರಿಕೆ ಹಾಕಿದವರನ್ನು ಫೈಝಲ್ ಕೊಲೆ ಪ್ರಕರಣದ ಆರೋಪಿಯಾದ ವಿನೋದ್ರ ಮಕ್ಕಳೆಂದು ಗುರುತಿಸಲಾಗಿದೆ. ಕಳೆದ ದಿವಸ ಮಸೀದಿಯಿಂದ ನಮಾಝ್ ಮುಗಿಸಿ ಬರುತ್ತಿದ್ದಾಗ ಮಕ್ಕಳನ್ನು ತಡೆದು ನಿಲ್ಲಿಸಿ ಆರೆಸ್ಸೆಸ್ ಕಾರ್ಯಕರ್ತ ಕೊಡಿಂಞಿ ಫಾರೂಕ್ ನಗರದ ಪೊನ್ನಾಟ್ಟ್ ಬೈಜು ಎಂಬಾತ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈತನನ್ನು ಕೂಡ ಫೈಝಲ್ ಕೊಲೆ ಪ್ರಕರಣದಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು.