ಎಸ್ಐಓ ವತಿಯಿಂದ ನವೆಂಬರ್ 14 ರಂದು ಕದ್ರಿ ಪಾರ್ಕ್ ನಲ್ಲಿ “ಕಲಾ ಉತ್ಸವ”

0
233

ಸನ್ಮಾರ್ಗ ವಾರ್ತೆ

ಮಂಗಳೂರು: ಎಸ್ ಐ ಓ ಆಫ್ ಇಂಡಿಯಾ, ದ.ಕ. ಹಮ್ಮಿಕೊಂಡಿರುವ “ಮಾದಕ ದ್ರವ್ಯ ಜಾಗೃತಿ ಅಭಿಯಾನ” ದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಜನ ಜಾಗೃತಿ ಮೂಡಿಸುತ್ತಾ ಬಂದಿದೆ.

ಈ ಪ್ರಯುಕ್ತ ಎಸ್ಐಓ ಮಂಗಳೂರು ನಗರ ಸಮಿತಿಯು ಇದೇ ಬರುವ ನವೆಂಬರ್ 14ರಂದು ಮಂಗಳವಾರ, ಮಂಗಳೂರಿನ ಕದ್ರಿ ಪಾರ್ಕಿನಲ್ಲಿ, ಮಧ್ಯಾಹ್ನ 3:00 ಗಂಟೆಗೆ “ಕಲಾ ಉತ್ಸವ”ವನ್ನು ಆಯೋಜಿಸಲಾಗಿದೆ.

ಕಲಾ ಉತ್ಸವದಲ್ಲಿ ಎಲ್ಲರಿಗೂ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ವಿಜೇತರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಗುವುದು. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9008137450 ಸಂಪರ್ಕಿಸಬಹುದು.