ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ರೈತರ ಹೋರಾಟವನ್ನು ಬೆಂಬಲಿಸುವವರ ವಿರುದ್ಧ ಭಾರತೀಯ ಸೆಲಬ್ರಿಟಿಗಳು ನಡೆಸುತ್ತಿರುವ ಅಭಿಯಾನವನ್ನು ಟೀಕಿಸಿ ಬಾಲಿವುಡ್ ತಾರೆ ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ.
ಇನ್ಸ್ಟ್ಗ್ರಾಂ ಸ್ಟೋರಿಯಲ್ಲಿ ಅಭಿಯಾನದ ವಿರುದ್ಧ ಅವರು ಪ್ರತಿಕ್ರಿಯಿಸಿದ್ದು ಮಾನವ ಹಕ್ಕು ಉಲ್ಲಂಘನೆಯ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ಧ್ವನಿಯೆತ್ತಿದೆ ಎಂದು ಹೇಳಿದ್ದಾರೆ. ಇಂಟರ್ನೆಟ್ ಸ್ಥಗಿತಗೊಳಿಸುವಿಕೆ, ಭಿನ್ನಾಭಿಪ್ರಾಯ ವಿರುದ್ಧ ನಿಯಂತ್ರಣಗಳು ಸರಕಾರಿ ಪ್ರೊಪೊಗಾಂಡ, ದ್ವೇಷ ಭಾಷಣಗಳ ವಿರುದ್ಧ ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯೆ ನೀಡಿದರು.
ಪತ್ರಕರ್ತರ ಮೇಲೆ ದಾಳಿ, ಇಂಟರ್ನೆಟ್ ನಿಷೇಧ, ಸರಕಾರಿ ವ್ಯವಸ್ಥೆಗಳು ಮತ್ತು ಕೆಲವು ಮಾಧ್ಯಮಗಳು ರೈತರನ್ನು ನಿಂದಿಸುವುದು, ಈ ಸಮಸ್ಯೆ ಅಂತಾರಾಷ್ಟ್ರೀಯ ಚರ್ಚೆಯಾಗಿದೆ ಎಂದು ಸೋನಾಕ್ಷಿ ಸಿನ್ಹಾ ಹೇಳಿದರು.
ರೈತರ ಹೋರಾಟದ ಕುರಿತು ಅಭಿಪ್ರಾಯ ಹೇಳುವವರನ್ನು ದೇಶದ ದಿನಚರಿಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲ. ಒಂದು ಮನುಷ್ಯ ಸಮುದಾಯಕ್ಕಾಗಿ ಮಾತಾಡುತ್ತಾರೆ ಎಂದು ಮಾತ್ರ ಹೇಳಲು ಸಾಧ್ಯ ಎಂದು ಅವರು ಹೇಳಿದರು.