ಗಾಂಧಿ ಹಂತಕ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ- ಕಮಲ್ ಹಸನ್

0
542

ಚೆನ್ನೈ,ಮೇ 13: ಗಾಂಧಿ ಹಂತಕ ನಾಥೂರಾಂ ವಿನಾಯಕ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಆಗಿದ್ದಾನೆ ಎಂದು ನಟ ಮತ್ತು ಮಕ್ಕಳ್ ನೀತಿ ಮಯ್ಯಂ ನಾಯಕ ಕಮಲ್ ಹಸನ್ ಹೇಳಿದರು. ತಮಿಳ್ನಾಡಿನ ಅರವಕುರಿಚ್ಚಿ ವಿಧಾನಸಭಾ ಕ್ಷೇತ್ರದ ಚುನಾವಣಾ ರ‌್ಯಾಲಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು. “ಧಾರಾಳ ಮುಸ್ಲಿಮರು ಚುನಾವಣಾ ರ್ಯಾಲಿಗೆ ಬಂದಿದ್ದಾರೆ. ಗಾಂಧಿ ಪ್ರತಿಮೆಯ ಮುಂದೆ ನಾನು ಹೇಳುತ್ತೇನೆ. ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಪದವಿ ಹಿಂದೂಗೆ ಇದೆ. ಆತನ ಹೆಸರು ನಾಥೂರಾಂ ಗೋಡ್ಸೆ” ಎಂದು ಕಮಲ್ ಹಸನ್ ಹೇಳಿದರು. “ರಾಜ್ಯದಲ್ಲಿ ಆಡಳಿತದಲ್ಲಿರುವ ಅಣ್ಣಾ ಡಿಎಂಕೆ ಮತ್ತು ಪ್ರತಿಪಕ್ಷ ಡಿಎಂಕೆಗೆ ವಿರುದ್ಧವಾದ ರಾಜಕೀಯ ಕ್ರಾಂತಿ ತಮಿಳ್ನಾಡಿನಲ್ಲಿ ಅಗತ್ಯವಾಗಿದೆ. ಕಷ್ಟಪಡುತ್ತಿರುವ ಜನರನ್ನು ಸಂತೈಸಲು ಆಡಳಿಗಾರರೂ ಪ್ರತಿಪಕ್ಷಗಳೂ ವಿಫಲವಾಗಿದೆ. ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಎರಡು ದ್ರಾವಿಡ ಪಾರ್ಟಿಗಳು ಸಿದ್ಧವಾಗಿಲ್ಲ” ಎಂದು ಕಮಲ್ ಹಸನ್ ಹೇಳಿದರು.