ರೈತ ಹೋರಾಟವನ್ನು ಬೆಂಬಲಿಸಿ ನಾಳೆಯಿಂದ ಅಣ್ಣಾ ಹಝಾರೆ ನಿರಾಹಾರ ಸತ್ಯಾಗ್ರಹ

0
457

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರೈತರನ್ನು ಬೆಂಬಲಿಸಿ ಕೇಂದ್ರ ಸರಕಾರದ ವಿರುದ್ಧ ನಿರಾಹಾರ ಸತ್ಯಾಗ್ರಹ ಆರಂಭಿಸುವುದಾಗಿ ಅಣ್ಣಾ ಹಝಾರೆ ಹೇಳಿದ್ದು, ಅವರು ಜನವರಿ 30ರಿಂದ ಅನಿರ್ಧಿಷ್ಟವಧಿ ಉಪವಾಸ ಸತ್ಯಾಗ್ರಹವನ್ನು ಘೋಷಿಸಿದ್ದಾರೆ.

ರೈತರಿಗಾಗಿ ತನ್ನ ಸೂಚನೆಗಳನ್ನು ಕೇಂದ್ರ ಸರಕಾರ ತಿರಸ್ಕರಿಸಿದ್ದಕ್ಕಾಗಿ ಸತ್ಯಾಗ್ರಹ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದರು. ಕಳೆದ ನಾಲ್ಕು ವರ್ಷಗಳಿಂದ ರೈತರ ಬೇಡಿಕೆಗಳಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು 83 ವರ್ಷದ ಅಣ್ಣ ಹಝಾರೆ ಹೇಳಿದರು.

ಮೂರು ತಿಂಗಳಲ್ಲಿ ಹಲವು ಬಾರಿ ಪ್ರಧಾನಿಗೆ ಮತ್ತು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಅವರು ತಿಳಿಸಿದರು. ರೈತರ ವಿಷಯದಲ್ಲಿ ಅಗತ್ಯ ಕ್ರಮಕ್ಕೆ ಕೇಂದ್ರ ತಯಾರಾಗಲಿಲ್ಲ. ರೈತರ ನಿಜಸ್ಥಿತಿ ಅರಿತುಕೊಳ್ಳಲು ಅದು ಸಿದ್ಧವಿಲ್ಲ. ಆದ್ದರಿಂದ ಜನವರಿ 30ರಿಂದ ರಲೇಗನ್ ಸಿದ್ಧಿಯ ಯಾದವ್‍ಬಾಬ ಮಂದಿರದಲ್ಲಿ ಅನಿರ್ಧಿಷ್ಟಾವಧಿ ನಿರಾಹಾರ ಸತ್ಯಾಗ್ರಹ ಮಾಡುತ್ತೇನೆ ಎಂದು ಅವರು ಘೋಷಿಸಿದರು.