ಕೋಝಿಕ್ಕೋಡ್, ಮಾ. 21: ಈ ಸಲದ ಲೋಕಸಭಾ ಚುನಾವಣೆಯಲ್ಲಿ ವೆಲ್ಫೇರ್ ಪಾರ್ಟಿ ಕೇರಳ ಘಟಕವು ಕಾಂಗ್ರೆಸ್ ನೇತೃತ್ವದ ಯುಡಿಎಫ್ಗೆ ಬೆಂಬಲ ಸೂಚಿಸಿದೆ. ಪಾರ್ಟಿ ಯುಡಿಎಫ್ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ಮಾಡಲಿದೆ ಎಂದು ವೆಲ್ಫೇರ್ ಪಾರ್ಟಿ ಕೇರಳ ಅಧ್ಯಕ್ಷ ಹಮೀದ್ ವಾಣಿಯಂಬಲಂ ಹೇಳಿದರು.
ಎಡಪಕ್ಷಗಳ ನೇತೃತ್ದ ಸರಕಾರದ ಆಡಳಿತ ನೀತಿ ಜನಪರವಾಗಿಲ್ಲ. ಆದ್ದರಿಂದ ಯುಡಿಎಫ್ ಅಭ್ಯರ್ಥಿಗಳ ಆಯ್ಕೆಗೆ ಶ್ರಮಿಸಲಾಗುವುದು ಎಂದು ವಾಣಿಯಂಬಲಂ ಹೇಳಿದರು.