ದಿಲ್ಲಿಯಲ್ಲಿ ಯುವಕನ ಕೊಲೆ: ಸಾಮಾಜಿಕ ಮಾಧ್ಯಮಗಳಲ್ಲಿ ದೃಶ್ಯ ವೈರಲ್

0
501

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಅ. 28: ದಿಲ್ಲಿಯಲ್ಲಿ ಯುವಕನನ್ನು ಗುಂಡಿಟ್ಟು ಕೊಲ್ಲುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದೆ. ದ್ವಾರದಲ್ಲಿ ಒಬ್ಬ ಯುವಕನನ್ನು ಇನ್ನೊಬ್ಬ ಯುವಕ ಕೊಲ್ಲುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗತ್ತಿದೆ. ಕೊಲೆಯ ನಂತರ ದುಷ್ಕರ್ಮಿ ತನ್ನ ಫೋನ್‍ನಲ್ಲಿ ಮೃತದೇಹದ ಫೋಟೊವನ್ನು ತೆಗೆಯುತ್ತಿದ್ದಾನೆ.

ಅಕ್ಟೋಬರ್ 22ರಂದು ಈ ಕೊಲೆ ನಡೆದಿತ್ತು. ವಿಕಾಸ್ ಎಂಬವರು ಕೊಲೆಯಾಗಿದ್ದರು. ಸಾಕ್ಷಿಗಳ ಆಧಾರದಲ್ಲಿ ಕಮಲ ಗೆಹ್ಲೋಟ್ ಮತ್ತು ತಂದೆ ಪವನ್ ಗೆಹ್ಲೋಟ್ ಎಂಬವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪವನ್ ಗೆಹ್ಲೋಟ್‍ನನ್ನು ಬಂಧಿಸಲಾಗಿದೆ. ವಿಕಾಸ್ ತಪ್ಪಿಸಿಕೊಂಡಿದ್ದು ಆತನನ್ನು ಹುಡುಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪುಟವನ್ನು like ಮಾಡಿ ನಮ್ಮನ್ನು ಬೆಂಬಲಿಸಿ.