ರಾಜಸ್ತಾನ: ಮಾಜಿ ಮುಖ್ಯಮಂತ್ರಿ ಪಹಾಡಿಯ ಕೊರೋನದಿಂದ ವಿಧಿ ವಶ

0
348

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರಾಜಸ್ತಾನದ ಮಾಜಿ ಮುಖ್ಯಮಂತ್ರಿ ಜಗನ್ನಾಥ ಪಹಾಡಿಯ ಬುಧವಾರ ತಡರಾತ್ರೆ ನಿಧನರಾದರು. ರಾಜ್ಯ ಸರಕಾರ ಅವರ ನಿಧನಕ್ಕೆ ಒಂದು ದಿನ ಶೋಕ ಘೋಷಿಸಿದೆ. ಮಾಜಿ ಮುಖ್ಯ ಮಂತ್ರಿ ಪಹಾಡಿಯ ಕೊರೋನ ಪೀಡಿತರಾಗಿದ್ದರು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪಹಾಡಿಯ ಅವರು ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರ ಸಚಿವರಾಗಿ ಸುದೀರ್ಘ ಸಮಯ ದೇಶದ ಸೇವೆ ಮಾಡಿದ್ದಾರೆ. ಗೆಹ್ಲೋಟ್‌ರವರ ಪ್ರಕಾರ ಪಹಾಡಿಯ ಕೊರೋನದ ಕಾರಣದಿಂದ ಮೃತಪಟ್ಟಿದ್ದಾರೆ. ಮತ್ತು ಅವರು ತನ್ನ ಸ್ನೇಹಿತನಾಗಿದ್ದರು ಎಂದು ಶೋಕ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ. ಪಹಾಡಿಯ ಗೌರವಾರ್ಥ ಒಂದು ದಿನದ ಶೋಕಾಚರಣೆ ನಡೆಸಲಾಗುವುದು. ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುವುದು. ಸರಕಾರಿ ಗೌರವಗಳೊಂದಿಗೆ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಕಾರ್ಯ ನಡೆಯಲಿದೆ.