ಕಾಂಗ್ರೆಸ್ ತೊರೆಯುದಾಗಿ ನಾನು ಹೇಳಿಲ್ಲ, ಮಾಧ್ಯಮಗಳು ಹೇಳಿದೆ-ಕಮಲ್‍ನಾಥ್

0
162

ಸನ್ಮಾರ್ಗ ವಾರ್ತೆ

ಭೋಪಾಲ್: ಪಕ್ಷ ಬದಲಾಯಿಸುತ್ತೇನೆ ಎಂದು ಹೇಳಿದ್ದು ಮಾಧ್ಯಮಗಳೇ ಹೊರತು ನಾನಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಮಲ್ ನಾಥ್ ಹೇಳಿದ್ದಾರೆ. ಕಮಲ್ ನಾಥ್ ಅವರು ಈ ರೀತಿಯ ಹೇಳಿಕೆಯನ್ನು ಎಂದಿಗೂ ನೀಡಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಾಧ್ಯಮಗಳು ಈ ಊಹಾಪೋಹಗಳನ್ನು ಮಾಡುತ್ತಿವೆಯೇ ಹೊರತು ಬೇರೆ ಯಾರೂ ಹೇಳುತ್ತಿಲ್ಲ. ನಾನು ಹೇಳುವುದನ್ನು ನೀವು ಎಂದಾದರೂ ಕೇಳಿದ್ದೀರಾ? ನೀವು ಈ ಸುದ್ದಿಯನ್ನು ನಿರಾಕರಿಸಬೇಕು.” ಎಂದು‌ ಅವರು ಹೇಳಿದರು.

ಬಿಜೆಪಿಗೆ ಕಮಲ್ ನಾಥ್ ರ ಅಗತ್ಯವಿಲ್ಲ ಎಂದು ಮಧ್ಯಪ್ರದೇಶದ ಸಚಿವ ಕೈಲಾಶ್ ವಿಜಯ ವರ್ಗಿಯವರು ಇತ್ತೀಚೆಗೆ ಹೇಳಿದ್ದರು. ಕಮಲ್ ನಾಥ್ ಬಿಜೆಪಿಗೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ಈ ಹಿಂದೆಯೇ ಸ್ಪಷ್ಟಪಡಿಸಿತ್ತು. ಮಧ್ಯಪ್ರದೇಶದ ಪಿಸಿಸಿ ಅಧ್ಯಕ್ಷ ಜಿತು ಪಟ್ವಾರಿ ಮತ್ತು ಹಿರಿಯ ನಾಯಕ ದಿಗ್ವಿಜಯ್‌ಸಿಂಗ್ ಅವರು ಕಮಲ್ ನಾಥ್ ಎಲ್ಲಿಯೂ ಹೋಗುತ್ತಿಲ್ಲ ಮತ್ತು ಕಾಂಗ್ರೆಸ್‌ನಲ್ಲೇ ಇರುತ್ತಾರೆ ಎಂದು ಹೇಳಿದ್ದಾರೆ.

ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ ವ್ಯಕ್ತಿಯ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದೆ ಎಂದು ಜಿತು ಪಟ್ವಾರಿ ಆರೋಪಿಸಿದ್ದಾರೆ. ನಾನು ಅವರನ್ನು ಮಾತನಾಡಿಸಿದಾಗ, ಮಾಧ್ಯಮಗಳಲ್ಲಿ ಬರುವುದೆಲ್ಲ ಷಡ್ಯಂತ್ರದ ಭಾಗವಾಗಿದೆ ಎಂದು ಕಮಲ್ ನಾಥ್ ಹೇಳಿದ್ದಾರೆ. ಈ ಹಿಂದೆ ಕಮಲ್ ನಾಥ್ ಅವರು ತಾವು ಕಾಂಗ್ರೆಸ್ಸಿಗ ಮತ್ತು ಕಾಂಗ್ರೆಸ್ಸಿನಲ್ಲೇ ಇರುವುದಾಗಿ ಪುನರುಚ್ಚರಿಸಿದರು.