ಉತ್ತರ ಪ್ರದೇಶ: ಕಸ್ಗಂಜ್ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿತ ಬೈಕ್ ರ್ಯಾಲಿಯ ವೇಳೆ ಗಲಭೆಯು ನಡೆಯಿತು. ಈ ಘಟನಾವಳಿಯ ಕುರಿತು ಮೂರು ನಾಗರಿಕ ಹಕ್ಕುಗಳ ಗುಂಪುಗಳು, ಎರಡು ಅಮೇರಿಕಾ ಮೂಲದ ಗುಂಪುಗಳು ಹಾಗೂ ಲಂಡನಿನ ಒಂದು ನಾಗರಿಕ ಗುಂಪು ಅಧ್ಯಯನ ವರದಿಯೊಂದನ್ನು ಬಿಡುಗಡೆಗೊಳಿಸಿದೆ.
ಘಟನಾವಳಿಗಳ ಕುರಿತು ಮತ್ತು ತದನಂತರದ ಬೆಳವಣಿಗೆಗಳ ಕುರಿತು ನಡೆಸಲಾದ ಈ ಅಧ್ಯಯನ ವರದಿಯಲ್ಲಿ “ದೆಹಲಿಯಿಂದ 220 ಕಿಲೋ ಮೀಟರ್ ದೂರದಲ್ಲಿರುವ ಒಂದು ಪಟ್ಟಣದಲ್ಲಿ ಚಂದನ್ ಗುಪ್ತಾ ಎಂಬ ವ್ಯಕ್ತಿಯು ಗುಂಡು ಹಾರಿಸುವುದರೊಂದಿಗೆ ದಹನ ಮತ್ತು ವಿದ್ವಂಸಕ ಕೃತ್ಯಗಳು ಸಂಭವಿಸಿವೆ” ಎಂದಿದೆ.
21 ಪುಟಗಳ ಸವಿವರ ವರದಿಯನ್ನು ಈ ಗುಂಪುಗಳು ತಯಾರಿಸಿದ್ದು ನಡೆದ ಘಟನಾವಳಿಗಳ ಇಂಚಿಂಚು ಪ್ರಕ್ರಿಯೆಗಳನ್ನು ಉಲ್ಲೇಖಿಸಿವೆಯಲ್ಲದೇ ಪೊಲೀಸರು ಯಾವ ರೀತಿ ಈ ಘಟನೆಯನ್ನು ಮುಸ್ಲಿಮರ ತಲೆಗೆ ಕಟ್ಟಿ ಹಿಂದೂಗಳನ್ನು ಸಂರಕ್ಷಿಸಿದರು ಎಂಬುದನ್ನು ತಿಳಿಸಿದೆ.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿ, ಸಿಟಿಜನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್, ನ್ಯೂರ್ಯಾಕಿನ ಯುನೈಟೆಟ್ ಆಗೆನ್ಸ್ಟ್ ಹೇಟ್, ಇಂಡಿಯನ್ ಅಮೇರಿಕನ್ ಮುಸ್ಲಿಮ್ ಕೌನ್ಸಿಲ್-ವಾಷಿಂಗ್ಟನ್ ಡಿಸಿ ಹಾಗೂ ಲಂಡನಿನ ಸೌತ್ ಏಷ್ಯಾ ಸಾಲಿಡಾರಿಟಿ ಗ್ರೂಪ್ಗಳು ಕಸ್ಗಂಜ್ನಲ್ಲಿ ನಡೆದ ಘಟನಾವಳಿಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿವೆ.