ಕುಸ್ತಿಪಟು ಯೋಗೇಶ್ವರ ದತ್ತ್ ಬರೋಡದಿಂದ ಬಿಜೆಪಿ ಅಭ್ಯರ್ಥಿ

0
363

ಸನ್ಮಾರ್ಗ ವಾರ್ತೆ

ಚಂಡೀಗಢ,ಅ.16: ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿ ಚಾಂಪಿಯನ್ ಯೋಗೇಶ್ವರ ದತ್ ಹರಿಯಾಣದ ಉಪ ಚುಣಾವಣೆಯಲ್ಲಿ ಬಿಜೆಪಿಯಿಂದ ಬರೋಡ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಅವರ ಅಭ್ಯರ್ಥಿತ್ವವನ್ನು ಬಿಜೆಪಿಯ ಕೇಂದ್ರ ಚುನವಾಣಾ ಸಮಿತಿ ಘೋಷಿಸಿದೆ.

2019 ಅಕ್ಟೋಬರಿನ ಹರಿಯಾಣ ವಿಧಾನಸಭಾ ಚುನಾವಣೆಗೆ ಮೊದಲು ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅಂದು ಬರೋಡ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಉಡ 4840 ಮತಗಳ ಬಹುಮತದಿಂದ ಗೆದ್ದಿದ್ದರು. ಸೋನಿಪತ್ ಲೋಕಸಭಾ ಕ್ಷೇತ್ರದಲ್ಲಿ ಬರೋಡ ವಿಧಾನಸಭಾ ಕ್ಷೇತ್ರವಿದೆ. 2012ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಹಾಗೂ 2014ರ ಕಾಮನ್‍ವೆಲ್ತ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. 2013ರಲ್ಲಿ ಯೋಗೇಶ್ವರ್‌ಗೆ ಪದ್ಮಶ್ರೀ ಪುರಸ್ಕಾರ ಬಂದಿತ್ತು.