ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ; ಇಬ್ಬರ ಸಾವು- ಕಾರಣವೇನು?

0
662

ಕೊಲ್ಕತಾ, ಜೂ. 11: ತೃಣಮೂಲ ಕಾಂಗ್ರೆಸ್ – ಬಿಜೆಪಿ ನಡುವೆ ಘರ್ಷಣಾ ಪರಿಸ್ಥಿತಿ ಮುಂದುವರಿದಿದ್ದು ಪಶ್ಚಿಮಬಂಗಾಳ ಉತ್ತರ ಪರಗಣ ಜಿಲ್ಲೆಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಪರಗಣ ಕನ್‍ಕಿನಾರ ಎಂಬಲ್ಲಿ ಸೋಮವಾರ ರಾತ್ರೆ ನಡೆದ ಸ್ಫೋಟದಲ್ಲಿ ಇಬ್ಬರು ಸಾವೀಗೀಡಾದ್ದು ನಾಲ್ವರು ಗಾಯಗೊಂಡಿದ್ದಾರೆ. ಘಟನೆಯ ಕುರಿತು ಪ್ರಾಥಮಿಕ ವರದಿಯು ರಾಜಕೀಯ ಸಂಘರ್ಷಕ್ಕೆ ಸಂಬಂಧಿಸಿದ ಘಟನೆಯಲ್ಲ ಎಂದು ತಿಳಿಸಿದೆ. ಕನ್‍ಕಿನಾರದಲ್ಲಿ ಇತ್ತೀಚೆಗೆ ಹಲವು ಕಡೆ ಕಳ್ಳತನ ನಡೆದಿತ್ತು. ಕಳ್ಳರ ಗುಂಪು ಸ್ಫೋಟದ ಹಿಂದಿವೆ ಎನ್ನಲಾಗುತ್ತಿದೆ. ಮೃತ ದೇಹಗಳನ್ನು ಗುರುತಿಸಲು ಆಗಿಲ್ಲ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ನೈಜಾತ್‍ನಲ್ಲಿ ಶನಿವಾರ ತೃಣಮೂಲ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ನಡೆದಿದ್ದ ಗಲಭೆಯಲ್ಲಿ ಐವರು ಮೃತಪಟ್ಟಿದ್ದರು.