ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಮದ್ಯಪಾನ ಮಾಡಿ ಬಂದವರಿಗೆ ಚಿಕನ್ ನೀಡಲು ನಿರಕಾರಿಸಿದ ಹೊಟೇಲಿಗೆ ಕುಡುಕರು ಬೆಂಕಿ ಹಾಕಿ ಪ್ರತೀಕಾರವೆಸಗಿದ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.
ಬೀದಿ ಬದಿಯ ಹೊಟೇಲಿಗೆ ರವಿವಾರ ಬೆಳಗ್ಗೆ ಇಬ್ಬರು ಬಂದಿದ್ದರು. ಕುಡಿದು ಮತ್ತಿನಲ್ಲಿದ್ದುದರಿಂದ ಅವರಿಗೆ ಚಿಕನ್ ಡಿಶ್ ಕೊಡಲು ಹೋಟೆಲಿನವರು ನಿರಾಕರಿಸಿದ್ದರು. ನಂತರ ಮಾತಿನ ಚಕಮಕಿ ನಡೆಯಿತು. ಕುಡುಕರು ಬೆಂಕಿಯಿಟ್ಟ ಪರಿಣಾಮವಾಗಿ ಹೊಟೇಲ್ ಪೂರ್ಣ ಸುಟ್ಟುಹೋಗಿದೆ. ಮಹಾರಾಷ್ಟ್ರ ಸಹಿತ ಒಂಬತ್ತು ರಾಜ್ಯಗಳಲ್ಲಿ ಹಕ್ಕಿಜ್ವರ ವಿಷಮ ಸ್ಥಿತಿಯಲ್ಲಿರುವಾಗಲೇ ಮಹಾರಾಷ್ಟ್ರದ ನಾಗಪುರದಲ್ಲಿ ಘಟನೆ ನಡೆದಿದೆ.
ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಆರೋಪಿಗಳಾದ ಶಂಕರ್ ತಾಯ್ಡೆ, ನಾಗರ್ ಪಟೇಲ್ರನ್ನು ಪೊಲೀಸರು ಬಂಧಿಸಿದ್ದಾರೆ.